ಕಳಸ ಲೈವ್ ವರದಿ
ಕಳಸ ಮಕ್ಕಿತಲೆ ಆರ್.ಕೆ. ಬ್ರಹ್ಮದೇವ್ ಅವರಿಗೆ ಶ್ರೀ ಪೆನುಗೊಂಡ ದಿಗಂಬರ ಜೈನ ಮಹಾ ಸಂಸ್ಥಾನಮಠ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಿಂದ ಶ್ರೀ ಜ್ವಾಲಾ ಭಕ್ತ ಚಿಂತಾಮಣಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಬ್ರಹ್ಮದೇವ ಅವರ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ಅಲ್ಲದೆ ಮಠದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಊಟೋಪಚಾರದ ವ್ಯವಸ್ಥೆ, ಶಾಮಿಯಾನದ ಜವಬ್ದಾರಿ ನಿರ್ವಹಣೆಯನ್ನು ಸೇವಾ ರೂಪದಲ್ಲಿ ನೀಡುವುದಲ್ಲದೆ ಶ್ರೀ ಜ್ವಾಲಾಮಾಲಿನಿ ಆಂಗ್ಲ ಮಾಧ್ಯಮ ಶಾಲೆಯ ಸಾರಿಗೆ ವ್ಯವಸ್ಥೆಗಾಗಿ 2 ಶಾಲಾ ಬಸ್ಸ್ಗಳನ್ನು ಉಚಿತವಾಗಿ ನೀಡಿ ಎಲೆ ಮರೆ ಕಾಯಿಯಂತೆ ಶ್ರಮಿಸುತ್ತಿರುವ ಬ್ರಹ್ಮದೇವ ಅವರಿಗೆ ಶುಕ್ರವಾರ ಸಿಂಹನಗದ್ದೆ ಬಸ್ತಿಮಠದ ರಥೋತ್ಸವದ ಸಂದರ್ಭದಲ್ಲಿ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜಿ ಅಭಿನಂದಿಸಿದರು.