ಕಳಸ ಲೈವ್ ವರದಿ
ಕಳಸ ಮತ್ತು ಸಂಸೆಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿಯವರಿಂದ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡದಾಳು ರಸ್ತೆಗೆ 20 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ನೆಪಾಲ್ ರಸ್ತೆಗೆ 40 ಲಕ್ಷ, ವಾಟೆ ಹಳ್ಳ ರಸ್ತೆಗೆ 40 ಲಕ್ಷ, ಮಸೀದಿಗುಡ್ಡ ರಸ್ತೆಗೆ 20 ಲಕ್ಷ, ಸಂಸೆ ಗಡಿ ರಸ್ತೆಯ ಮೋರಿ ನಿರ್ಮಾಣಕ್ಕಾಗಿ 20 ಲಕ್ಷ ಹಾಗೂ ಕಾಂಕ್ರೀಟ್ ರಸ್ತೆಗೆ 5 ಲಕ್ಷ, ಕಲ್ಲಂಕಿ ಸೈಟ್ ರಸ್ತೆಗೆ 10 ಲಕ್ಷ, ಜೋಗಿ ಕುಂಬ್ರಿ ರಸ್ತೆಗೆ ಒಂದು ಕೋಟಿ ಹತ್ತು ಲಕ್ಷ, ಶುಂಠಿ ಕುಂಬ್ರಿ ರಸ್ತೆಗೆ 50 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಅಲ್ಲದೆ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹೋಬಳಿ ಅಧ್ಯಕ್ಷ ನಾಗಭೂಷಣ್ ಭಟ್, ಮುಖಂಡರಾದ ಗಿರೀಶ್ ಹೆಮ್ಮೆಕಿ, ವೆಂಕಟಸುಬ್ಬಯ್ಯ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಯ ಸದಾನಂದ, ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಕಳಕೊಡು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ಸಂಸೆ, ಮೋಹನ್ ಗುಳ್ಯ, ಕುಮಾರ್ ಸಂಸೆ, ಧರಣೇಂದ್ರ ಮೇಸ್ತ್ರಿ ಬಳಗಲ್, ಸತೀಶ್ ಮುಳ್ಳೊಡಿ, ಬಸವರಾಜ್ ಸಂಸೆ, ವಿಜಯ್ ಮಾವಿನ ಕೊಂಬೆ, ಗೋಪಾಲ್ ಸಂಪಾನೆ, ಸುರೇಶ್ ಜಾರುಕುಣಿ ಇತರರು ಇದ್ದರು.