ಕಳಸ ಲೈವ್ ವರದಿ
ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ತಲಗೂರು ಗ್ರಾಮದ ಬಿಳಗಲಿಯಿಂದ ಬ್ಯಾರಲಗದ್ದೆಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣವಾಗದೆ ಇರುವ ಹಿನ್ನಲೆಯಲ್ಲಿ ಬ್ಯಾರಲಗದ್ದೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಇಲ್ಲಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ಪ್ರತೀ ವರ್ಷ ಬೇಡಿಕೆ ಇಡುತ್ತಲೇ ಇದ್ದೇವೆ. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಇತ್ತ ಗಮನವೇ ಕೊಡುತ್ತಿಲ್ಲ. ಮಳೆಗಾಲದಲ್ಲಿ ಈ ಭಾಗದ ಗ್ರಾಮಸ್ಥರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತೇವೆ. ನಮ್ಮ ಮನವಿಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಇರುವ ಹಿನ್ನಲೆಯಲ್ಲಿ ನಾವು ಮತ ಚಲಾಯಿಸಿ ಏನು ಪ್ರಯೋಜನ ಎಂದು ಈ ಬಾರಿ ಮತದಾನವನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಈ ಭಾಗದ ಗ್ರಾಮಸ್ಥರು ಹೇಳುತ್ತಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸದಾಶಿವ, ಸುನಂದ, ಹರೀಶ, ಸಂತೋಷ್, ಶಿವಕುಮಾರ್, ಸುರೇಶ್, ನಿತೀನ್, ಗಣೇಶ್, ರಾಜೇಶ್ ಇದ್ದರು.