ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸೀದಿಗುಡ್ಡ ಮತ್ತು ಕಾರ್ಮಾಣ್ಣು ಗುಡ್ಡ ಪ್ರದೇಶಕ್ಕೆ ತೆರಳುವ ರಸ್ತೆಯ ಕಾಮಗಾರಿ ಪ್ರಾರಂಭ ಮಾಡದೆ ಇರುವ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಆ ಭಾಗದ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಸಂಸೆ ಮಸೀದಿ ಸಮೀಪ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಮಸೀದಿ ಸಮೀಪದಿಂದ ಬೇಕರಿವರೆಗೆ ತೆರಳುವ ಐಟಿಐ ರಸ್ತೆಗೆ ಅನುದಾನ ಮಂಜೂರಾಗಿ ಟೆಂಡರ್ ಕೂಡ ಆಗಿರುತ್ತದೆ.ಆದರೆ ಈ ವರೆಗೆ ಯಾವುದೇ ರೀತಿಯ ಕಾಮಗಾರಿಗಳನ್ನು ಪ್ರಾರಂಬಿಸಿರುವುದಿಲ್ಲ ಇದು ಈ ಭಾಗದ ಜನಪ್ರತಿನಿಧಿಗಳ ಮತ್ತು ಲೋಕೋಪಯೋಗಿ ಇಲಾಖಾ ಇಂಜಿನೀಯರ ಬೇಜಾವಬ್ದಾರಿ ತನವನ್ನು ಎತ್ತಿ ತೋರಿಸುತ್ತಿದೆ.ರಸ್ತೆಯು ಸಂಪೂರ್ಣವಾಗಿ ಶಿಥಿಲವಾಗಿದ್ದರೂ ಕೂಡ ಕಾಮಗಾರಿಯನ್ನು ಪ್ರಾರಂಭಮಾಡುತ್ತಿಲ್ಲ.ಈ ಬಗ್ಗೆ ಅದೆಷ್ಟೋ ಬಾರಿ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಲಿಲ್ಲ.ಆದ್ದರಿಂದ ಇದನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ.ಅಲ್ಲದೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ.ಅಲ್ಲದೆ ಈ ಗ್ರಾಮಕ್ಕೆ ಕುಡಿಯುವ ನೀರು,ಬೀದಿ ದೀಪಗಳು, ಬಾಕ್ಸ್ ಚರಂಡಿಯನ್ನು ನಿಮಿಸಬೇಕು ಹಾಗೂ ಕಾರ್ಮಣ್ಣು ಗುಡ್ಡ ಪರಿಶಿಷ್ಟ ಜಾತಿ ಪ್ರದೇಶಕ್ಕೆ ಕಾಂಕ್ರೀಟ್ ರಸ್ತೆ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಈ ಸಂದರ್ಬದಲ್ಲಿ ಕಳಸ ರೆವಿನ್ಯೂ ಇನ್ಸ್ಪೆಕ್ಟರ್ ಅಜ್ಜೇಗೌಡ ಸ್ಥಳಕ್ಕೆ ಆಗಮಿಸಿ, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಜೊತೆ ದೂರವಾಣಿ ಮುಖಾಂತರ ಮತುಕತೆ ನಡೆಸಿದ್ದಾರೆ.ಸೋಮವಾರದಿಂದ ರಸ್ತೆ ಕಾಮಗಾರಿ ನಡೆಸುವುದಾಗಿ ಇಂಜಿನಿಯರ್ ಒಪ್ಪಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀನಿವಾಸ, ರಜಾಕ್, ಯೂಸೂಫ್, ರಶಿದ್, ನೈಸ್ ರಜಾಕ್ ಇದ್ದರು.