ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸೀದಿಗುಡ್ಡ ಮತ್ತು ಕಾರ್ಮಾಣ್ಣು ಗುಡ್ಡ ಪ್ರದೇಶಕ್ಕೆ ತೆರಳುವ ರಸ್ತೆಯ ಕಾಮಗಾರಿ ಪ್ರಾರಂಭ ಮಾಡದೆ ಇದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಆ ಭಾಗದ ಗ್ರಾಮಸ್ಥರು ತಿಳಸಿದ್ದಾರೆ.
ಈ ಬಗ್ಗೆ ಗುರುವಾರ ಕಳಸ ತಾಲ್ಲೂಕು ಕಚೇರಿ ಮತ್ತು ಸಂಸೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಸಂಸೆ ಮಸೀದಿಯಂದ ಬೇಕರಿವರೆಗೆ ತೆರಳುವ ಐಟಿಐ ರಸ್ತೆಗೆ ಅನುದಾನ ಮಂಜೂರಾಗಿ ಟೆಂಡರ್ ಕೂಡ ಆಗಿರುತ್ತದೆ.ಆದರೆ ಈ ವರೆಗೆ ಯಾವುದೇ ರೀತಿಯ ಕಾಮಗಾರಿಗಳನ್ನು ಪ್ರಾರಂಬಿಸಿರುವುದಿಲ್ಲ. ಮತ್ತು ಚರಂಡಿ ವ್ಯವಸ್ಥೆ ಇರುವುದಿಲ್ಲ.
ಅಲ್ಲದೆ ಕುಡಿಯುವ ನೀರು, ಬೀದಿ ದೀಪಗಳು, ಬಾಕ್ಸ್ ಚರಂಡಿಯನ್ನು ನಿರ್ಮಿಸಬೇಕು ಹಾಗೂ ಕಾರ್ಮಣ್ಣು ಗುಡ್ಡ ಪರಿಶಿಷ್ಟ ಜಾತಿ ಪ್ರದೇಶಕ್ಕೆ ಕಾಂಕ್ರೀಟ್ ರಸ್ತೆ ಮಾಡಿಕೊಡಬೇಕು. ಈ ಬಗ್ಗೆ ಶುಕ್ರವಾರವೇ ಈ ಪ್ರದೇಶದಲ್ಲಿ ಬ್ಯಾನರ್ ಕಟ್ಟಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.