ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನ ಸುಧಾ ಕಾಲೇಜಿನ ಉಪನ್ಯಾಸಕಿ ರಾಜ್ಯ ಪ್ರಶಸ್ತಿ ವಿಜೇತೆ ಸಂಗೀತಾ ಮಾತನಾಡಿ ಹೆಣ್ಣು ಅವಳು ಕೇವಲ ಹೆಣ್ಣಲ್ಲ ಅವಳು ಮನೆಯನ್ನು, ಮನಸ್ಸನ್ನು ಬೆಳಗುವವಳು. ಮನೆಯಲ್ಲಿರುವ ಲಕ್ಷ್ಮೀ ಸಂತೋಷವಾಗಿದ್ದರೆ ಮಾತ್ರ ಆ ಮನೆಯ ವಾತಾವರಣ ನೆಮ್ಮದಿಯಾಗಿರುತ್ತದೆ. ಕೇವಲ ಅಡುಗೆ ಕೋಣೆಗೆ ಸೀಮಿತ ವಾಗಿದ್ದ ಮಹಿಳೆ ಇಂದು ಎಲ್ಲಾ ರಂಗದಲ್ಲೂ ಎತ್ತರದ ಮಟ್ಟದಲ್ಲಿದ್ದಾಳೆ. ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರವನ್ನು ಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಐರಿನ್ ಲೋಬೋ, ನಿವೃತ್ತ ಆರೋಗ್ಯ ಸಹಾಯಕಿ ಸರೋಜ, ನಿವೃತ್ತ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಸೀತಮ್ಮ ಇವರನ್ನು ಗೌರವಿಸಲಾಯಿತು.
ಕುದುರೆಮುಖ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆನಸಿನಕಾಯಿ, ಕಳಸ ತಹಶೀಲ್ದಾರ್ ಹೇಮಂತ್ ಕುಮಾರ್. ಪಿಡಿಒ ಕವೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಇದ್ದರು.
ಕಳಸ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಐರಿನ್ ಲೋಬೋ, ಸರೋಜ, ಅಧಿಕಾರಿ ಸೀತಮ್ಮ ಇವರನ್ನು ಗೌರವಿಸಲಾಯಿತು.