ಕಳಸ ಲೈವ್ ವರದಿ
ಕಳಸ ತಾಲೂಕು ದಾರಿಮನೆ ಮತ್ತು ಆಲ್ದೂರು ಹೋಬಳಿ ನೆರಡಿ ಗ್ರಾಮದ ಮನೆಗಳಲ್ಲಿ ಕಳವು ಮಾಡಿದ್ದ ಇಬ್ಬರನ್ನು ಕಳಸ ಪೊಲೀಸರು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ನಂದಕುಮಾರ್ ರವಿ ಆದಿಗೌಡ, ಹುಬ್ಬಳ್ಳಿ ಗಂಗಪ್ಪ ಯಲ್ಲಪ್ಪ ಮುಳಗುಂದ್ ಬಂಧಿತ ಆರೋಪಿಗಳು.
ಎರಡೂ ಮನೆ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ 72 ಗ್ರಾಂ ಚಿನ್ನಾಭರಣ, 31 ಗ್ರಾಂ ಬೆಳ್ಳಿ ಆಭರಣ ಮತ್ತು 14 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಫೆ.3ರಂದು ಕಳಸ ತಾಲೂಕಿನ ದಾರಿಮನೆ ಗ್ರಾಮದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಫೆ.7ರಂದು ಆಲ್ದೂರು ಹೋಬಳಿ ನೆರಡಿ ಗ್ರಾಮದಲ್ಲಿ ಮನೆ ಬೀಗ ಒಡೆದು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದು ವಿಚಾರಣೆ ಸಂದರ್ಭ ತಿಳಿದುಬಂದಿದೆ.
ಕಳಸ ಪಿಎಸ್ಐ ಹರ್ಷವರ್ಧನ್, ಸಿಬ್ಬಂದಿ ಜಯಕುಮಾರ್, ಪ್ರದೀಪ, ಕೆ.ಜೆ.ಶಂಕರ್, ಯಾಕುಬ್ ತಾಂಬೂಲಿ, ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.