ಕಳಸ ಲೈವ್ ವರದಿ
ಇಲ್ಲಿಯ ಆದಿಶಕ್ತ್ಯಾತ್ಮಕ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವವು ಗುರುವಾರ ವಿಜ್ರಂಬಣೆಯಿಂದ ನಡೆಯಿತು.
ಹೊರನಾಡಿನಲ್ಲಿ ಬೆಳಿಗ್ಗೆಯಿಂದಲೇ ಜನ ಜಂಗುಳಿ,ಹೊರನಾಡು ಸುತ್ತಮುತ್ತಲಿನ,ಅಲ್ಲದೆ ರಾಜ್ಯ ಅಂತರಾಜ್ಯಗಳಿಂದ ಸಾವಿರಾರು ಜನ ತಂಡೋಪ ತಂಡವಾಗಿ ಬಂದು ಶ್ರೀದೇವರಿಗೆ ತಲೆಬಾಗಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.
ಮಧ್ಯಾಹ್ನ ಹನ್ನೆರಡು ಗಂಟೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತಾ,ಚತ್ರಿ ಚಾಮರ ಮಂಗಳವಾದ್ಯಗಳೊಂದಿಗೆ ಹೂೀವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು..ಈ ಸಂದರ್ಭದಲ್ಲಿ ನೆರೆದ ಸಾವಿರಾರು ಕೃಷಿಕ ಬಂದುಗಳ ಮನೆ ಮನಗಳಲ್ಲಿ ಸಂಭ್ರಮ ಸಡಗರ ಸಂತೋಷ ಎದ್ದು ಕಾಣುತ್ತಿತ್ತು.ಸಾಮಾಜಿಕ ಮತ್ತು ಆರ್ಥಿಕ ತುಮುಳಗಳನ್ನು ಬದಿಗಿಟ್ಟು ಮೈಮೆರೆತ ಭಕ್ತ ಸಮುದಾಯದಲ್ಲಿ ಧರ್ಮ ಕೂಟ ಭಕ್ತಿ ಪ್ರದಾನವಾಗಿ ಕಂಗೊಳಿಸುತ್ತಿತ್ತು.ಶ್ರೀ ದೇವರ ಮೂರ್ತಿಯನ್ನು ಕಂಡು ಸೇರಿದ ಸಾವಿರಾರು ಭಕ್ತರು ಭಕ್ತಿ,ಭಾವ ಪರವಶವಾದರು.ರಥದ ಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.ಆ ವೇಳೆಯಲ್ಲಿ ಸಮಸ್ತ ಭಕ್ತಾದಿಗಳೂ ಭಾಗಿಯಾಗಿ ದೇವರಿಗೆ ಫಲ,ಪುಷ್ಪಾದಿ,ಅರ್ಚನೆ ಸೇವೆ ಮಾಡುವುದರೊಂದಿಗೆ,ತಾವು ಬೆಳೆದ ಕಾಫಿ,ಕಾಳುಮೆಣಸು,ಏಲಕ್ಕಿ ಮುಂತಾದ ದವಸ ಧಾನ್ಯಗಳನ್ನು ಬ್ರಹ್ಮರಥಕ್ಕೆ ಎಸೆದು ಪುನೀತರಾದರು.ಭಕ್ತಾದಿಗಳು ರಥದ ಚಕ್ರಕ್ಕೆ ತೆಂಗಿನಕಾಯಿಯನ್ನು ಒಡೆದು ತಮ್ಮ ಹರಕೆಯನ್ನು ತೀರಿಸಿಕೊಂಡರು.ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾದಿಗಳು ಎಳೆದರು.ರಥವೇರಿ ಕುಳಿತ ದೇವರೂ ತನ್ಮಯರಾಗಿ,ಚಿನ್ಮಯ ಮೂರ್ತಿಯಾಗಿ ಕಂಗೊಳಿಸುತ್ತಿದ್ದರು.ಈ ಒಂದು ಸುಂದರ ದೃಶ್ಯವನ್ನು ಭಕ್ತರು ಮಾಕ ಪ್ರೇಕ್ಷಕರಂತೆ ಭಕ್ತಿಯಿಂದ ಕಣ್ತುಂಬಿಸಿಕೊಂಡರು.
.