ಕಳಸ ಲೈವ್ ವರದಿ
ಪಂಚಾಯತ್ರಾಜ್ ಇಲಾಖೆಯಿಂದ ನೀಡಲಾಗುವ 2021-22ನೇ ಸಾಲಿನ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಳಸ ತಾಲೂಕಿನ ಕಳಸ ಗ್ರಾಮ ಪಂಚಾಯಿತಿ ಆಯ್ಕೆಯಾಗಿವೆ. ಆಯ್ಕೆಯಾದ ಗ್ರಾಪಂಗೆ 5 ಲಕ್ಷ ರೂ. ನಗದು ಬಹುಮಾನ ಸಿಗಲಿದೆ.
ಇದರೊಂದಿಗೆ ಚಿಕ್ಕಮಗಳೂರು ತಾಲೂಕಿನ ಹರಿಹರದ ಹಳ್ಳಿ, ಅಜ್ಜಂಪುರದ ಕಲ್ಲೇನಹಳ್ಳಿ, ಕಡೂರಿನ ಪಂಚನಹಳ್ಳಿ, ಕೊಪ್ಪದ ಹೇರೂರು, ಮೂಡಿಗೆರೆಯ ಊರುಬಗೆ, ಎನ್.ಆರ್.ಪುರದ ಗುಬ್ಬಿಗಾ, ಶೃಂಗೇರಿಯ ಬೇಗಾರು, ತರೀಕೆರೆಯ ಕುದ್ದೂರು ಗ್ರಾಪಂಗಳು ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಸ್ಥಳೀಯವಾಗಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ರೂಪುಗೊಂಡು ಕಾರ್ಯನಿರ್ವಹಿಸಬೇಕೆಂಬ ಪರಿಣಾಮಕಾರಿಯಾಗಿ ಸದುದ್ದೇಶದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಗಳನ್ನು ಪೆÇ್ರೀತ್ಸಾಹಿಸಲು ಈ ಪುರಸ್ಕಾರ ನೀಡಲಾಗುತ್ತದೆ. ತಾಲೂಕಿಗೊಂದರಂತೆ ಹೆಚ್ಚು ಅಂಕಗಳನ್ನು ಪಡೆದ ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಒಲಿದಿದೆ. ಈ ಹಣವನ್ನು ಗ್ರಾಪಂ ಆಡಳಿತವು ಗ್ರಾಮಾಭಿವೃದ್ಧಿ, ಶಿಕ್ಷಣ ಕ್ಷೇತ್ರ ಮತ್ತಿತರ ಕಾರ್ಯಗಳಿಗೆ ವಿನಿಯೋಗಿಸಬಹುದಾಗಿದೆ.