ಕಳಸ ಲೈವ್ ವರದಿ
ಕರ್ನಾಟಕ ಬ್ಯಾಂಕ್ ಗ್ರಾಮೀಣ ಮಟ್ಟದಲ್ಲಿ ನೀಡುತ್ತಿರುವ ಉತ್ತಮ ಸೇವೆಯಿಂದ ಇಂದು ಅತೀ ಎತ್ತರಕ್ಕೆ ಬೆಳೆದು 99 ವರ್ಷಗಳನ್ನು ಪೂರೈಸಿ 100 ವರ್ಷದ ವರ್ಷಾಚರಣೆಯನ್ನು ಆಚರಿಸುತ್ತಿದೆ ಎಂದು ಕಿರುತೆರೆ ನಟ ರಾಜಗೋಪಾಲ ಜೋಷಿ ಹೇಳಿದರು
ಕಳಸ ಕರ್ನಾಟಕ ಬ್ಯಾಂಕ್ನಲ್ಲಿ ಶನಿವಾರ ಬ್ಯಾಂಕ್ ನ ಶತಮನೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ಣಾಟಕ ಬ್ಯಾಂಕ್ ಸತತ 99 ವರ್ಷಗಳಿಂದ ಉತ್ತಮ ಗ್ರಾಹಕ ಸೇವೆಯನ್ನು ನೀಡುತ್ತಾ ಗ್ರಾಹಕರ ಮನದಾಳದಲ್ಲಿ “ಕರ್ಣಾಟಕ ಬ್ಯಾಂಕ್ ಕುಟುಂಬದ ಬ್ಯಾಂಕ್ ” ಎಂಬ ಭಾವನೆಯನ್ನು , ನಂಬಿಕೆಯನ್ನು ಬಲಪಡಿಸುತ್ತಾ ಬಂದಿದೆ. 1924 ಫೆಬ್ರವರಿ 18ರಂದು ಅತ್ಯುತ್ತಮ ಧ್ಯೇಯೋದ್ದೇಶಗಳನ್ನು ಹೊಂದಿ ಜನ್ಮತಳೆದ ಕರ್ಣಾಟಕ ಬ್ಯಾಂಕ್ ದೇಶದ ಜನಮಾನಸದ ಕಣ್ಮಣಿ ಎನಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ, ನಿರಂತರ ಪ್ರಗತಿ ಪಥದಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್, ಬ್ಯಾಂಕ್ ವ್ಯವಸ್ಥಾಪಕ ಸಿ.ಕೆ.ಮೂರ್ತಿ, ವಕೀಲ ಸತೀಶ್ ಪ್ರಭು, ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಮೋಹನ್ ರಾಜಣ್ಣ, ಉಧ್ಯಮಿ ಅನಿಲ್ ಗ್ಯಾವಿನ್, ಕಾಫಿ ಬೆಳೆಗಾರರಾದ ಶೈಲೇಶ್, ವಕೀಲ ವೆಂಕಟೇಶ್ ಇತರರು ಇದ್ದರು.