ಕಳಸ ವೈವ್ ವರದಿ
ಕಳಸ ತಾಲ್ಲೂಕಿನಲ್ಲಿ ಕಳೆದ ಕೆಲ ತಿಂಗಳುಗಳಿಂದ ಬೀಡು ಬಿಟ್ಟು, ರೈತರಿಗೆ ತೊಂದರೆ ನೀಡುತ್ತಿರುವ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಮತ್ತು ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಬೇಕು ಎಂದು ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ನೇತ್ರತ್ವದ ತಂಡ ಅರಣ್ಯ ಇಲಾಖೆ ವಿರುದ್ದ ಶುಕ್ರವಾರ ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರೇಶ್ ಕಹಳೆ ಒಂದೆಡೆ ರಾಜ್ಯ ಸರ್ಕಾರ ಇಂದು ಬಜೇಟ್ ಮಂಡನೆ ಮಾಡುತ್ತಿದೆ. ಆದರೆ ಇಲ್ಲಿ ಕಳೆದ 6 ತಿಂಗಳಿಂದ ಕಳಸ ತಾಲ್ಲೂಕಿನ ರೈತರ ಕೃಷಿ ಜಮೀನಿಗೆ 2 ಆನೆಗಳು ಹಾನಿ ಮಾಡುತ್ತಿವೆ. ಗ್ರಾಮಸ್ಥರು ಆನೆ ದಾಳಿಯ ಭೀತಿಯಿಂದ ಬದುಕುವಂತಾಗಿದೆ. ಆದರೆ ಅರಣ್ಯ ಇಲಾಖೆ ಆನೆಗಳನ್ನು ಹಿಡಿಯುವ ಬದಲು ಕಾಡಿಗೆ ಅಟ್ಟುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಆನೆ ಹಿಡಿಯಲು ವಿಳಂಬ ಮಾಡಿದರೆ ಸಹಿಸುವುದಿಲ್ಲ. ಅಹಿತಕರ ಘಟನೆ ಆಗುವ ಮೊದಲು ಆನೆ ಹಿಡಿಯಿರಿ. ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ವಿಧಾನಸೌಧಕ್ಕೂ ತೆರಳಿ ಸಕಾರದ ಮೇಲೆ ಒತ್ತಡ ಹೇರುತ್ತೇವೆ. ಆನೆಗಳು ತೋಟಕ್ಕೆ ನುಗ್ಗಿದಾಗ ಅರಣ್ಯ ಓಡಿಸುವ ಪ್ರಯತ್ನ ಮಾಡುತ್ತಿದೆ ಹೊರತು ಶಾಶ್ವತ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರ ಆನೆ ಹಿಡಿಯಲು ಅನುಮತಿ ನೀಡಿದರೂ ಕೂಡ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರುದ್ರೇಶ್ ಹೇಳಿದರು.
ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮಾತನಾಡಿ ಆನೆ ಹಾವಳಿಯಿಂದ ರೈತರ ಸಾಕಷ್ಟು ಪ್ರಮಾಣದ ಕೃಷಿ ಭೂಮಿ ಹಾನಿಯಾಗಿದೆ. ಆರು ತಿಂಗಳಿಂದ ಆನೆಗಳು ಬೀಡು ಬಿಟ್ಟಿದ್ದರೂ ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಲಾಖೆಯ ಬೇಜಾವಬ್ದಾರಿ ತನದಿಂದ ಇಂದು ಕೃಷಿಕರು ಬೀದಿಗೆ ಬಂದು ಇಲಾಖೆಯ ವಿರುದ್ದ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
ಸ್ಥಳಕ್ಕೆ ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಬಂದು ಮನವಿ ಸ್ವೀಕರಿಸಿದರು.ನಂತರ ಮಾತನಾಡಿದ ಅವರು ಆನೆ ಹಿಡಿಯಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ಅನುಮತಿ ಸಿಕ್ಕ ತಕ್ಷಣ ಹಿಡಿಯುತ್ತೇವೆ ಎಂದರು.
ಇಲಾಖೆಯ ಮಾತಿಗೆ ಒಪ್ಪಿ, ಈ ತಿಂಗಳ ಕೊನೆಯ ಒಳಗೆ ಒಂದು ನಿರ್ಧಾರಕ್ಕೆ ಬಂದು ಆನೆ ಹಿಡಿಯಲು ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿ ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ರಫೀಕ್,ಸುಜಿತ್, ಶ್ರೀನಿವಾಸ್,ಗ್ರಾಮಸ್ಥರಾದ ಲವ,ಕುಶ, ಸುದೀರ್, ಸುನಿಲ್ ಇತರರು ಇದ್ದರು.