ಕಳಸ ಲೈವ್ ವರದಿ
ಕುದುರೆಮುಖ ಗಿರಿಶ್ರೇಣಿಗಲಲ್ಲಿ ಕಳೆದ ಐದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಶುಕ್ರವಾರವೂ ಸತತವಾಗಿ ಬೆಂಕಿ ಉರಿಯುತ್ತಿದ್ದ ದೃಶ್ಯ ಸಂಸೆ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕಂಡು ಬಂದಿದೆ.
ಕುದುರೆಮುಖ ಭಾಗದಲ್ಲಿರುವ ಸಾಕಷ್ಟು ಪ್ರದೇಶ ಹುಲ್ಲುಗಾವಲು ಈ ಬೆಂಕಿಗೆ ಆಹುತಿ ಆಗಿದೆ. ಕಳೆದ ಕೆಲ ವರ್ಷಗಳಿಂದ ಇದೇ ಪ್ರಥಮ ಬಾರಿಗೆ ಇಷ್ಟೋಂದು ಪ್ರಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅರಣ್ಯ ಇಲಾಖೆ ಸತತ ಪ್ರಯತ್ನ ಪಟ್ಟರೂ ಕೂಡ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಈ ಬೆಂಕಿಯಿಂದ ಹುಲ್ಲು ಗಾವಲಿನಲ್ಲಿ ಕಾಣಿಸಿಕೊಳ್ಳುವ ಹಾವು, ಇನ್ನಿತರೆ ಜೀವ ಜಂತುಗಳು ಬೆಂಕಿಯ ಕೆನ್ನಾಲೆಗೆ ಆಹುತಿಯಾಗಿದೆ.
ಈ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದಾಗ ಈ ಭಾಗಕ್ಕೆ ಬರುವ ಅರಣ್ಯಾಧಿಕಾರಿಗಳು ಸ್ಥಳಿಯರೊಂದಿಗೆ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಂಡು ಜನರೊಂದಿಗೆ ಬೆರೆಯುತ್ತಿದ್ದರು. ಆದಕ್ಕೆ ತಕ್ಕಂತೆ ಗ್ರಾಮಸ್ಥರು ಎಲ್ಲಿಯೂ ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳುತ್ತಿದ್ದರು. ಬೆಂಕಿ ಬಿದ್ದರೆ ಸ್ಥಳಿಯರು ಕೂಡ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಬೆಂಕಿಯನ್ನು ನಂದಿಸಲು ಕೈ ಜೋಡಿಸುತ್ತಿದ್ದರು. ಆದರೆ ಈ ಬಾರಿ ಬಂದಿರುವ ಅರಣ್ಯ ಅಧಿಕಾರಿ ಜನರೊಂದಿಗೆ ಬೆರೆಯದೆ ಸ್ಥಳಿಯ ಗ್ರಾಮಸ್ಥರನ್ನು ದೂರ ಇಟ್ಟಿದ್ದಾರೆ. ಆದರೆ ಗ್ರಾಮಸ್ಥರು ಕಾಡಿಗೆ ಬೆಂಕಿ ಕೊಡುವಂತ ಮನಸ್ಥಿತಿ ಯಾರೀಗೂ ಇಲ್ಲ. ಅಂತಹ ಕೆಲಸವನ್ನು ಇಲ್ಲಿ ಯಾರೂ ಮಾಡುವುದು ಇಲ್ಲ. ಆದರೆ ಗ್ರಾಮಸ್ಥರು ಮಾತ್ರ ಈ ಭಾರಿ ಇಲಾಖೆಯೊಂದಿಗೆ ಯಾರೂ ಕೈ ಜೋಡಿಸುತ್ತಿಲ್ಲ ಇದಕ್ಕೆ ಇಲಾಖೆಯ ಅಧಿಕಾರಿಗಳೆ ನೇರ ಕಾರಣ ಕರ್ತರು ಎನ್ನುತ್ತಿದ್ದಾರೆ.