ಕಳಸ ಲೈವ್ ವರದಿ
ಸಂಸೆ ಗಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿಗದ್ದೆ, ವಾಟೆಹಳ್ಳ ಗ್ರಾಮದಲ್ಲಿ ಹಾದು ಹೋಗುವ ರಸ್ತೆಯನ್ನು ದುರಸ್ಥಿ ಪಡಿಸದೆ ಇದ್ದರೆ ರಸ್ತೆಗೆ ಚರಂಡಿ ತೆಗೆದು ಮತದಾನ ಭಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಶುಕ್ರವಾರ ಸರ್ಕಾರಕ್ಕೆ ಶಿರೆಸ್ತೆದಾರ್ ಸುದಾ ಅವರ ಮುಖಾಂತರ ಮನವಿ ಸಲ್ಲಿಸಿದ್ದಾರೆ.
ಸಂಸೆ ಗ್ರಾಮದ ಬಸ್ತಿಗದ್ದೆ, ವಾಟೆಹಳ್ಳದ ಮೂಲಕ ಎಸ್.ಕೆ.ಮೇಗಲ್ ತೆರಳುವ ರಸ್ತೆಯನ್ನು ಅಗೆದು ಜಲ್ಲಿಹಾಕಿ ಹಾಗೆಯೇ ಬಿಟ್ಟಿರುತ್ತಾರೆ. ಮೂರು ವರ್ಷಗಳಿಂದ ಕಾಮಗಾರಿ ನಡೆಸದೆ ಇರುವುದರಿಂದ ಜಲ್ಲಿ ಎದ್ದು ಓಡಾಡಲು ಅನಾನುಕೂಲವಾಗಿರುತ್ತದೆ. ಸಂಸೆ ಶಾಲೆಗೆ ಹೋಗು ರಸ್ತೆಯಾಗಿದ್ದು, ಶಾಲಾ ಮಕ್ಕಳು ಓಡಾಡಲು ತೊಂದರೆಯಾಗುತ್ತಿದೆ.
ಈ ರಸ್ತೆಯ ಕಾಮಗಾರಿಯ ವಿಳಂಬ ಮಾಡುತಿರುವುದನ್ನು ಖಂಡಿಸಿ ಮುಂದಿನ ಸೋಮವಾರ ರಸ್ತೆಗೆ ಚರಂಡಿ ತೆಗೆದು ಮತದಾನ ಬಹಿಷ್ಕಾರ ಮಾಡುವುದಾಗಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀನಿವಾಸ್, ಸುಜಿತ್, ಸತೀಶ್, ರಾಘವೇಂದ್ರ, ಯೋಗೀಶ್ ಇದ್ದರು.