ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಹಿಡಿದು ಕೂಡಲೆ ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ಕಳಸ ಅರಣ್ಯ ಇಲಾಖೆ ಮುಂಭಾಗ ಧರಣಿ ಕೂರುವುದಾಗಿ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.
ಮಂಗಳವಾರ ಕಳಸ ಆರ್ಎಪ್ಒ ನಿಶ್ಚಿತ್ ಎಂ.ಎಸ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕಳೆದ ಐದು ತಿಂಗಳಿನಿಂದ ಕಳಸ ತಾಲ್ಲೂಕಿಲ್ಲಿ ಎರಡು ಆನೆಗಳು ಬೀಡು ಬಿಟ್ಟಿವೆ. ರೈತರ ಲಕ್ಷಾಂತರ ರೂಪೈ ಮೌಲ್ಯದ ಕೃಷಿಯನ್ನು ಹಾಳು ಮಾಡಿವೆ. ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ದೊಡ್ಡ ಅನಾಹುತ ಆಗುವ ಮೊದಲು ಆನೆಗಳನ್ನು ಕೂಡಲೇ ಹಿಡಿದು ಸ್ಥಳಾಂತರಿಸಬೇಕು.
ಹದಿನೈದು ದಿನದ ಕಾಲವಕಾಶ ನೀಡುತ್ತಿದ್ದೇವೆ ಇಷ್ಟರ ಒಳಗೆ ಆನೆಯನ್ನು ಹಿಡಿದು ಸ್ಥಳಾಂತರ ಮಾಡದಿದ್ದರೆ ಇಲಾಖೆಯ ಎದುರು ಧರಣಿ ಕೂರುವುದಾಗಿ ತಿಳಿಸಿದರು.
ಜೆಡಿಎಸ್ ಮುಖಂಡರಾದ ಸಂತೋಷ್ ಹಿನಾರಿ, ಜಿ.ಕೆ.ಮಂಜಪ್ಪಯ್ಯ, ಜ್ವಾಲನಯ್ಯ ಆಶಾಲತಾ ಡಿ ಜೈನ್, ಅರುಣ್ ಕುಮಾರ್, ಮಂಜುನಾಥ್,ಭಾಸ್ಕರ, ನೀಲಯ್ಯ