ಕಳಸ ಲೈವ್ ವರದಿ
ಇಲ್ಲಿನ ಜೆಇಎಂ ಶಾಲೆಯ ಸ್ಕೌಟ್ಸ್ ತಂಡದ ಮಹಿತ್ ಹೆಬ್ಬಾರ್ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಪುರಸ್ಕಾರ ಗಳಿಸಿದ್ದಾನೆ.
10ನೆ ತರಗತಿ ವಿದ್ಯಾರ್ಥಿ ಆಗಿರುವ ಮಹಿತ್ ಆರ್. ಹೆಬ್ಬಾರ್ ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯಪಾಲರ ಪುರಸ್ಕಾರ ಪಡೆದ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸಾಧಿಸಿದ್ದಾನೆ.
ರಾಜ್ಯ ಮಟ್ಟದ ಅಥ್ಲೀಟ್ ಕೂಡ ಆಗಿರುವ ಮಹಿತ್ ಜೊತೆಗೆ ಜಿಲ್ಲೆಯ ಇನ್ನೂ 9 ಪಟುಗಳು ರಾಜಭವನಕ್ಕೆ ಪ್ರವೇಶ ಪಡೆದಿದ್ದರು. ಆದರೆ ರಾಜ್ಯಪಾಲರಿಂದ ಗೌರವ ಸ್ವೀಕರಿಸಿಲು ಪ್ರತಿ ಜಿಲ್ಲೆಯಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಯಿತು. ಆ ಗೌರವ ಮಹಿತ್ ಹೆಬ್ಬಾರ್ ಪಾಲಾಯಿತು.
ನಿವೃತ್ತ ಸೇನಾ ಅಧಿಕಾರಿಗಳು ಮಾಡಿದ ಆಯ್ಕೆಯಲ್ಲಿ ಮಹಿತ್ ಹೆಬ್ಬಾರ್ ಈ ಗೌರವ ಪಡೆದನು ಎಂದು ಜೆಇಎಂ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರರೂ ಆದ ಮುಖ್ಯ ಉಪಾಧ್ಯಾಯ ಪ್ರಶಾಂತ್ ಹೆಚ್.ಆರ್. ತಿಳಿಸಿದ್ದಾರೆ.
ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಘಟಕದ ಅಧ್ಯಕ್ಷರಾದ ಪಿಜಿಆರ್ ಸಿಂಧ್ಯಾ ಕೂಡ ಇದ್ದರು.
ರಾಜ್ಯದಲ್ಲಿ ಒಟ್ಟು 5 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು.ಜೆಇಎಂ ಶಾಲೆಯ ಎಲ್ಲ 20 ವಿದ್ಯಾರ್ಥಿಗಳು ಸ್ಕೌಟ್ಸ್ ಪರೀಕ್ಷೆ ತೇರ್ಗಡೆ ಆಗಿದ್ದರು. ಮಹಿತ್ ಹೆಬ್ಬಾರ್ ಜೊತೆಗೆ ಸುಜಿತ್ ಶೆಟ್ಟಿ ಕೂಡ ಬೆಂಗಳೂರಿನ ರಾಜಭವನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು