ಕಳಸ ಲೈವ್ ವರದಿ
ಇಲ್ಲಿಯ ಹೊರನಾಡು ರಸ್ತೆಯ ವರಮಹಾಲಕ್ಷ್ಮೀ ಕಟ್ಟಡದಲ್ಲಿ ಭಾನುವಾರ ಧವಳ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಕಳಸ ಶಾಖೆಯ ಉದ್ಘಾಟನಾ ಸಮಾರಂಭವು ನೆರವೇರಿತು.
ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠ,ನರಸಿಂಹರಾಜಪುರದ ಸ್ವಸ್ತಿ ಶ್ರೀಮದ್ ಅಭಿನವ ಲಕ್ಷ್ಮೀ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು.
ಶಾಖೆಯ ಕಛೇರಿ ಉದ್ಘಾಟನೆ ಹೊರನಾಡು ಅಂಕರಕಣದ ಜಿ.ರಾಮನಾರಾಯಣ ಜೋಷಿ ನೆರವೇರಿಸಿ ಬ್ಯಾಂಕ್ನ ಯಶಸ್ವಿಗೆ ಠೇವಣಿದಾರರು ಮಾತ್ರವಲ್ಲ ಸಾಲಗಾರರು ಕೂಡ ಮುಖ್ಯವಾಗಿರುತ್ತಾರೆ. ಸಾಲವನ್ನು ಕೊಡುವಾಗ ತಾಯಿ ರೂಪದಲ್ಲಿ ಕೊಟ್ಟು, ವಸೂಲಿ ಮಾಡುವಾಗ ತಂದೆಯ ರೂಪದಲ್ಲಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕೆಸಿಎ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ ಭದ್ರತಾ ಕೊಠಡಿ ಉದ್ಘಾಟಿಸಿದರು. ಉದ್ಯಮಿ ಕೃಷ್ಣ ಶೆಟ್ಟಿ ಗೋದಾಮನ್ನು, ಬಿಜೆಪಿ ಮುಖಂಡ ಹೆಮ್ಮಕ್ಕಿ ಗಿರೀಶ್ ಕಂಪ್ಯೂಟರ್ ಕೊಠಡಿ ಉದ್ಘಾಟನೆ ಮಾಡಿದರು. ಡಾ.ವಿಶ್ವನಾಥ ಪ್ರಭು ಠೇವಣಿ ಪತ್ರ ಬಿಡುಗಡೆ ಮಾಡಿದರು.
ಧವಳ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಜಿನೇಂದ್ರ ಕುಮಾರ್ ಜೈನ್, ಸಂಸ್ಥೆಯ ನಿರ್ದೇಶಕರಾದ ಬ್ರಹ್ಮದೇವ, ಕಡೇಪಾಲ್ ಪ್ರದೀಪ್, ಪುಷ್ಪರಾಜ್, ರಾಜೇಶ್, ಯುವರಾಜ್ ಜೈನ್, ಸಚಿನ್ ಕುಮಾರ್, ಶಿಶುಪಾಲ್ ಜೈನ್, ಸುಧೀರ್ ಕುಮಾರ್, ರಾಜಶ್ರೀ ಹೆಗ್ಡೆ, ಶಶಿಕಲಾ ಹೆಗ್ಡೆ,
ಉದ್ಯಮಿಗಳಾದ ಕೆ.ಕೆ.ಬಾಲಕೃಷ್ಣ ಭಟ್ ,ಅನಿಲ್ ಡಿಸೋಜ, ಹೆಚ್.ಸಿ.ಅಣ್ಣಯ್ಯ, ಅಬ್ದುಲ್ ಕರೀಂ ಭಾಗವಹಿಸಿದ್ದರು.