ಕಳಸ ಲೈವ್ ವರದಿ
ಇಲ್ಲಿಯ ಶ್ರೀ ವಿಶ್ವಬ್ರಾಹ್ಮಣ ಸೇವಾ ಸಮಿತಿಯ ವಾರ್ಷಿಕೋತ್ಸವ ಭಾನುವಾರ ಕಳಸ ಕಲ್ಲುಬಾವಿ ಶ್ರೀ ವಿಶ್ವಕರ್ಮ ಸಭಾ ಭವನದಲ್ಲಿ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಉಪನಯನ ಮತ್ತು ಶ್ರೀ ವಿಶ್ವಕರ್ಮ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಶ್ಮೀ ಮಂಂಜುನಾಥ್, ಲಲಿತಾ ಜಗತ್ಪಾಲ್, ಶ್ಯಾಮಚಾರ್, ವೆಂಕಟಚಾರ್, ಶಿಕ್ಷಕ ಸಂದೇಶ್, ಶಿಕ್ಷಕ ರಮೇಶ್ ಸೇರಿದಂತೆ ಪ್ರತಿಭಾನ್ವಿತ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಆರ್.ಧಾಮೋಧರ ಶರ್ಮ, ಸಂಘದ ಅಧ್ಯಕ್ಷ ಪಿ.ಎ.ಕುಮಾರಸ್ವಾಮಿ, ಜಿಲ್ಲಾ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ಕೆ.ಎಲ್.ರಮೇಶ್ ಆಚಾರ್ಯ, ಗಾಯತ್ರಿ ಮಹಿಳಾ ಮಂಡಳಿ ಗೌರವಾಧ್ಯಕ್ಷ ಉಷಾ ಕುಮಾರಸ್ವಾಮಿ, ಅಧ್ಯಕ್ಷೆ ಪ್ರೇಮ ಸುಬ್ರಹ್ಮಣ್ಯ ಆಚಾರ್ಯ ಇದ್ದರು.