ಕಳಸ ಲೈವ್ ವರದಿ
ಇದೇ ತಿಂಗಳ 12ರಂದು ಮಂಗಳೂರು ಮೂಲದ ಧವಳ ಕೋ ಆಪರೇಟಿವ್ ಸೊಸೈಟಿಯ ಕಳಸ ಶಾಖೆ ಆರಂಭಗೊಳ್ಳಲಿದೆ ಎಂದು ಧವಳ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಬ್ರಹ್ಮದೇವ ತಿಳಿಸಿದ್ದಾರೆ.
ಹೊರನಾಡು ರಸ್ತೆಯ ವೆಂಕಟರಮಣ ದೇವಸ್ಥಾನದ ಬಳಿಯ ರತ್ನವರ್ಮ ಅವರ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಶಾಖೆ ಆರಂಭಗೊಳ್ಳಲಿದ್ದು, ಶಾಖೆಯ ಉದ್ಘಾಟನೆಯನ್ನು ಎನ್.ಆರ್. ಪುರ ಬಸ್ತಿಮಠದ ಲಕ್ಷ್ಮೀಸೇನ ಸ್ವಾಮೀಜಿ ಮಾಡಲಿದ್ದಾರೆ.
ಹೊರನಾಡಿನ ಅಂಕರಕಣದ ರಾಮನಾರಾಯಣ ಜೋಷಿ ಕಚೇರಿ ಉದ್ಘಾಟಿಸಲಿದ್ದು ಧವಳ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಜಿ.ಕೆ.ಮಂಜಪ್ಪಯ್ಯ ಭದ್ರತಾ ಕೊಠಡಿಯನ್ನು, ಕೆ.ಆರ್.ಪ್ರಭಾಕರ್ ಗೋದಾಮನ್ನು, ಹೆಮ್ಮಕಿ ಗಿರೀಶ್ ಕಂಪ್ಯೂಟರ್ ವಿಭಾಗವನ್ನು ಮತ್ತು ಡಾ.ಕೆ.ಪಿ. ವಿಶ್ವನಾಥ ಪ್ರಭು ಠೇವಣಿ ಪತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ.
ಸಂಸೆ ಮೂಲದ ವಕೀಲ ಜಿನೇಂದ್ರ ಕುಮಾರ್ ಜೈನ್ ಧವಳ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು ಕಳಸದ ಬ್ರಹ್ಮದೇವ ಮತ್ತು ಸಂಸೆಯ ಪ್ರದೀಪ್ ಕಡೇಪಾಲ್ ಸಂಸ್ಥೆಯಲ್ಲಿ ಕಳಸ ತಾಲ್ಲೂಕಿನ ಪ್ರತಿನಿಧಿ ನಿರ್ದೇಶಕರಾಗಿದ್ದಾರೆ.