ಕಳಸ ಲೈವ್ ವರದಿ
ಮರಸಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಾವಡಿಬೈಲು ಇದರ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ರೂ 2,00,000 ಸಹಾಯಧನ ನೀಡಿದ್ದಾರೆ.
ಈ ಸಹಾಯಧನವನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ರವರು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಶಿವಾನಂದ ಪಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ರಘುನಾಥ್, ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಅಜಿತ್ ಕಳಸ, ವಲಯ ಮೇಲ್ವಿಚಾರಕರಾದ ಶ್ರೀನಿವಾಸ್, ಒಕ್ಕೂಟ ಅಧ್ಯಕ್ಷರಾದ ಆನಂದ, ಮಾಜಿ ಅಧ್ಯಕ್ಷರಾದ ಶ್ರೀಮತಿ ಪುಷ್ಪ, ಸೇವಾಪ್ರತಿನಿಧಿ ಶ್ರೀಮತಿ ಶ್ರೀಲತಾ, ವಿಪತ್ತು ಘಟಕದ ಸ್ವಯಂಸೇವಕರಾದ ರವಿ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಾದ ವಸಂತ್ ಹೆಬ್ಬಾರ್,ಕೃಷ್ಣೇ ಗೌಡ, ಮಹೇಂದ್ರ, ಎಂ ಆರ್ ಸುರೇಶ್, ಎಂ ಆರ್ ಸುಂದರೇಶ್, ಎಂ ಸಿ ಸಂತೋಷ್, ಬಿಜಿ ಸಂಪತ್, ನೀಲಕಂಠ ರಾವ್ ಉಪಸ್ಥಿತರಿದ್ದರು.