ಕಳಸ ಲೈವ್ ವರದಿ
ಕಳಸ ತಾಲೂಕಿನ ಕುಂಬಳಡಿಕೆ ಎಂ.ಪಿ.ಕುಮಾರಸ್ವಾಮಿ ಬಡಾವಣೆಯಲ್ಲಿರುವ ನಿತ್ಯ ಪೂಜಾ ಕೊರಗಜ್ಜನ ಕಲ್ಲಿನಲ್ಲಿ ಕೊರಗಜ್ಜನ ಪ್ರತಿಬಿಂಬ ಕಾಣಿಸಿಕೊಂಡಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.
ಇಲ್ಲಿ ಕೊರಗಜ್ಜನ ಮೂರ್ತಿ ಪ್ರತಿಷ್ಠೆ, ಕೊರಗಜ್ಜನ ಕೋಲ ಮತ್ತು ಅಗೆಲು ಸೇವೆ ನಡೆಸಲು ಈಗಾಗಲೇ ಪೆ 24ನೇ ತಾರಿಕಿಗೆ ನಡೆಸಲು ಸಿದ್ದತೆ ನಡೆಸಲಾಗಿದೆ.ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಇಲ್ಲಿ ಇಷ್ಟು ದಿನ ಕೊರಗಜ್ಜನ ಕಲ್ಲನ್ನು ಇಟ್ಟು ನಿತ್ಯ ಪೂಜೆ ಮಾಡಲಾಗುತ್ತಿದೆ.ಆದರೆ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪಣೆಯ ಮೊದಲೆ ಕಲ್ಲಿನಲ್ಲಿ ಕೊರಗಜ್ಜನ ಪ್ರತಿಬಿಂಬ ಕಾಣಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಇಲ್ಲಿಯ ವ್ಯವಸ್ಥಾಪಕ ಸಂಜೀವ ಹೇಳುವಂತೆ ಇಷ್ಟು ದಿನ ಇಲ್ಲಿ ಪ್ರತಿನಿತ್ಯ ಕೊರಗಜ್ಜನ ಕಲ್ಲನ್ನು ನಿತ್ಯ ನೀರಿನಲ್ಲಿ ತೊಳೆದು ಪೂಜೆ ಮಾಡಲಾಗುತ್ತಿತ್ತು.ಆದರೆ ಶುಕ್ರವಾರ ಪೂಜೆ ಮಾಡುವ ಸಂದರ್ಭದಲ್ಲಿ ಕಲ್ಲಿನಲ್ಲಿ ಕೊರಗಜ್ಜನನ್ನೆ ಹೋಲುವಂತೆ ಪ್ರತಿಬಿಂಬ ಕಾಣಿಸಿಕೊಂಡಿದ್ದು ಅಚ್ಚರಿಗೊಂಡಿದ್ದೆ. ಈಗಾಗಲೇ ಇಲ್ಲಿ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪಣೆಗೆ ದಿನ ನಿಗದಿಯನ್ನು ಮಾಡಿದ್ದೇವೆ.ಕಳೆದ ಎರಡು ದಿನಗಳ ಹಿಂದೆಯಷ್ಟೆ ಕೊರಗಜ್ಜನ ಬಳಿ ಇಲ್ಲಿ ಕೊರಗಜ್ಜ ಇದೆ ಅಂತಾದ್ರೆ ನಿನ್ನ ಶಕ್ತಿಯನ್ನು ಇಲ್ಲಿ ತೋರಿಸಿಕೊಡಬೇಕು ಎಂದು ಕೇಳಿಕೊಂಡಿದ್ದೆ. ಇದಾದ ಎರಡೇ ದಿನಕ್ಕೆ ಈ ರೀತಿಯ ಪವಾಡ ನಡೆದಿದೆ ಎಂದರು.
ಸುದ್ದಿ ತಿಳಿಯುತ್ತಿದ್ದಂತೆ ಈ ವಿಸ್ಮಯವನ್ನು ನೋಡಲು ಕೊರಗಜ್ಜನ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ನಡೆದಿರುವ ಪವಾಡವನ್ನು ವೀಕ್ಷಿಸುತ್ತಿದ್ದಾರೆ.