ಕಳಸ ಲೈವ್ ವರದಿ
ಕಳಸದಲ್ಲಿ ಪೆ 5ರಂದು ನಡೆಯಬೇಕಾಗಿದ್ದ ಕಳಸ ಉತ್ಸವವನ್ನು ಕಾರಣಾಂತರದಿಂದ ಪೆ 7ಕ್ಕೆ ಮುಂದೂಡಲಾಗಿದೆ. ಕಳಸ ಉತ್ಸವದ ಪೂರ್ವಭಾವಿ ಸಭೆ ಕೆಪಿಎಸ್ ಶಾಲಾ ಆವರಣದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತ್ರತ್ವದಲ್ಲಿ ಸರ್ವಪಕ್ಷಗಳು, ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಗುರುವಾರ ನಡೆಯಿತು.
ಅದ್ದೂರಿಯಾಗಿ ಕಳಸದಲ್ಲಿ ಒಂದು ದಿನ ಕಳಸ ಉತ್ಸವ ನಡೆಯಲಿದ್ದು, ಇದಕ್ಕಾಗಿ ಈಗಾಗಲೆ ವಿವಿಧ ಸಮಿತಿಗಳನ್ನು ರಚಿಸಿ ಅದರ ಮುಖಾಂತರ ಕಾರ್ಯಕ್ರಮದ ರೂಪು ರೇಷೆಗಳನ್ನು ಹಾಕಿಕೊಳ್ಳಲಾಗಿದೆ. ಉತ್ಸವದಲ್ಲಿ ಹೆಲಿ ಟೂರಿಸಂ ಮುಖ್ಯ ಪಾತ್ರವಹಿಸಲಿದೆ. ಮಧ್ಯಾಹ್ನದ ನಂತರ ಅದ್ದೂರಿಯ ಉತ್ಸವ ಮೆರವಣಿಗೆ ನಡೆಯಲಿದೆ ಮೆರವಣಿಗೆಯಲ್ಲಿ ವಿವಿಧ ಪ್ರಕಾರದ ವೇಷ ಭೂಷಣಗಳು, ಶಾಲಾ ಕಾಲೇಜುಗಳಿಂದ ಟ್ಯಾಬ್ಲೋಗಳು ಇರಲಿದೆ. ನಂತರ ಸಭಾ ಕಾರ್ಯಕ್ರಮ, ಸಭಾ ಕಾರ್ಯಕ್ರಮಕ್ಕೆ ಕಂದಾಯ ಸಚಿವರನ್ನು ಕರೆಸುವ ಯೋಚನೆ ಇದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ನಾಲ್ಕು ಮಂದಿ ಸಾಧಕರನ್ನು ಗೌರವಿಸಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ವಿವಿಧ ಬಗೆಯಲ್ಲಿ ಆಹಾರ ಮೇಳಗಳು, ಇಲಾಖೆಗಳ ಮಳಿಗೆಗಳು ಇರಲಿದೆ. ಇದರಲ್ಲಿ ಎಲ್ಲಾ ಪಕ್ಷಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಭಾಗವಹಿಸುತ್ತಿದ್ದು, ಕಳಸದಲ್ಲಿ ಒಂದು ಅದ್ದೂರಿಯ ಕಾರ್ಯಕ್ರಮವಾಗಲಿದೆ ಎಂದು ಎಂದು ಮಾಹಿತಿ ನೀಡಿದರು.
ಹೆಲಿ ಟೂರಿಸಂ ಒಂದು ದಿನ ಮಾಡಿದರೆ ಸಾಕಾಗುವುದಿಲ್ಲ ಎರಡು ದಿನಗಳ ಕಾಲ ನಡೆಸಬೇಕು ಎಂದು ಶಾಸಕರನ್ನು ಸಾರ್ವಜನಿಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಂದಕುಮಾರ್, ಉಪತಹಶೀಲ್ದಾರ್ ಹೇಮಂತ್ ಕುಮಾರ್, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಬಿಜೆಪಿ ಅಧ್ಯಕ್ಷ ನಾಗಭೂಷನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ, ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವೃಷಭರಾಜ್, ಕಸಾಪ ತಾಲೂಕು ಅಧ್ಯಕ್ಷ ಸತೀಶ್ಚಂದ್ರ, ಮಹಿಳಾ ಅಧ್ಯಕ್ಷೆ ಮಮ್ತಾಜ್ ಬೇಗಂ, ಮುಖಂಡರಾದ ಎಂ.ಎ.ಶೇಷಗಿರಿ, ಕೆ.ಸಿ.ಧರಣೇಂದ್ರ ಇತರರು ಇದ್ದರು.