ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ 2023ರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಪಟ್ಟಣದ ಆನೆಗುಡ್ಡ ಹೋಂ ಸ್ಟೇ ಆವರಣದಲ್ಲಿ ನಡೆಯಿತು.
ಜೆಸಿಐ ವಲಯ 14ರ ಅಧ್ಯಕ್ಷೆ ಯಶಸ್ವಿನಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ನಿರ್ಗಮಿತ ಅಧ್ಯಕ್ಷ ಪ್ರಶಾಂತ್ ಹೆಚ್.ಆರ್ ಅವರಿಂದ ನೂತನ ಅಧ್ಯಕ್ಷ ಚರಣ್ ಎಸ್ ಅಧಿಕಾರ ಸ್ವೀಕರಿಸಿದರು. ನೂತನ ಸದಸ್ಯರಾದ ತನ್ವೀರ್, ಮಾರುತೇಶ್, ಜೈಪ್ರಕಾಶ್, ನಂದನ್ ಗೌಡ ಅವರಿಗೆ ವಲಯ ಉಪಾಧ್ಯಕ್ಷ ಆಂಟನಿ ನೆಲ್ಸನ್ ಡಿಸೋಜ ಪ್ರಮಾಣ ವಚನ ಬೋಧಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಕಾಂತ್(ಕಾರ್ಯದರ್ಶಿ), ಸಂತೋಷ್.ಎಂ.ಎಸ್(ಉಪಾಧ್ಯಕ್ಷ), ಸುಧೀರ್(ಉಪಾಧ್ಯಕ್ಷ), ಮುರುಳಿ(ಉಪಾಧ್ಯಕ್ಷ), ಶಿವಪ್ರಸಾದ್ ಎಂ (ಉಪಾಧ್ಯಕ್ಷ), ಸುನಿಲ್ ಆಚಾರ್ಯ(ಉಪಾಧ್ಯಕ್ಷ), ಸತೀಶ್(ಸಹಕಾರ್ಯದರ್ಶಿ), ಸುಧಾಕರ್(ಸಂವಹನಾ ಕಾರ್ಯದರ್ಶಿ), ಮಧುಗೌಡ(ಖಜಾಂಚಿ) ಇವರಿಗೆ ನೂತನ ಅಧ್ಯಕ್ಷ ಚರಣ್ ಪ್ರಮಾಣ ವಚನ ಬೋಧಿಸಿದರು.
ಕಳಸ ಜೆಸಿಐ ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ಅಶೋಕ್ ಆರ್ ಜಾವಳಿ, ಪೂರ್ವಾಧ್ಯಕ್ಷರುಗಳಾದ ಕೆ.ಸಿ.ಮಹೇಶ್, ಬಿ.ಕೆ. ಮಹೇಶ್, ಪ್ರಕಾಶ್ ಕುಮಾರ್, ಸುರೇಂದ್ರ ಇದ್ದರು.