ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಮೂರನೇ ತರಗತಿಯ ವಿದ್ಯಾರ್ಥಿ ಪ್ರಣೀಕ್ ತನ್ನ ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯ ಈತ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡ್ನಲ್ಲಿ ದಾಖಲೆ ಬರೆದಿದ್ದಾನೆ.
ತಾಲ್ಲೂಕಿನ ಬಾಳೆಖಾನ್ ಜೀಪ್ ಚಾಲಕರಾಗಿರುವ ಕೇಶವ ಮತ್ತು ಪುಷ್ಪ ದಂಪತಿಗಳ ಪುತ್ರನಾಗಿದ್ದಾನೆ.
ತನ್ನ ಎಂಟನೆಯ ವಯಸ್ಸಿನಲ್ಲಿ ಭಾರತದ ರಾಜ್ಯಗಳು ಮತ್ತು ಅದರ ಮುಖ್ಯ ಮಂತ್ರಿಗಳ ಹೆಸರನ್ನು ಒಂದು ನಿಮಿಷದಲ್ಲಿ A-Z ರೂಪದಲ್ಲಿ ಕ್ರಮಬದ್ದವಾಗಿ ಹೇಳುವುದು,ಒಂದು ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ಹೇಳುವುದು, ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಮತ್ತು ಪ್ರತಿ ವರ್ಣಮಾಲೆಯ ಶಬ್ದಕೋಶದ ಬಗ್ಗೆ ಹೇಳುವುದು, ಕನ್ನಡ ವರ್ಣಮಾಲೆಯ ಬಗ್ಗೆ ವಾಕ್ಯ ಉದಾಹರಣೆಗಳೊಂದಿಗೆ ವಿವರಿಸುವುದು, ಡಾ.ರಾಜ್ ಕುಮಾರ್ ಅಭಿನಯದ 205 ಚಲನಚಿತ್ರಗಳ ಹೆಸರುಗಳನ್ನು ಹೇಳುವುದು. A-Z ವಿಶೇಷ ರೀತಿಯಲ್ಲಿ ಉತ್ತಮ ಉದಾಹರಣೆಗಳೊಂದಿಗೆ ಪ್ರತಿ ವರ್ಣಮಾಲೆಗೆ ವಾಕ್ಯವನ್ನು ಹೇಳುವ ಈತನ ಈ ಬಹುಮುಖ ಪ್ರತಿಭೆ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೇಕಾರ್ಡ್ ಆಗಿದೆ.
ಇವರನ್ನು ಗುರುವಾರ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ನಡೆದ ಸರಸ್ವತಿ ಪೂಜಾ ಸಮಾರಂಭದ ಕೃತಂಸ್ಮರ ಹಾಗೂ ಪ್ರತಿಭಾ ಪುರಸ್ಕಾರ ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈತನ ಸಾಧನೆಗಾಗಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್ ಇವರು ನಗದು ಪುರಸ್ಕಾರ ನೀಡಿ ಗೌರವಿಸಿದಲ್ಲದೆ.ಈತನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಹೊರನಾಡಿನ ರಾಜಗೋಪಾಲ ಜೋಷಿ ಸೇರಿದಂತೆ ಪ್ರಬೋಧಿನಿ ವಿದ್ಯಾಕೇಂದ್ರ ಆಡಳಿತ ವರ್ಗ ಅಭಿನಂದನೆ ಸಲ್ಲಿಸಿದರು.