ಕಳಸ ಲೈವ್ ವರದಿ
ಅಪಘಾತವಾಗಿ ತೀವ್ರ ಪೆಟ್ಟಾಗಿ ನರಳುತ್ತಿದ್ದ ಜಾನುವಾರೊಂದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿಕಿತ್ಸೆ ಕೊಡಿಸಿದೆ. ಜಾನುವಾರೊಂದು ಹಳುವಳ್ಳಿಯಲ್ಲಿ ಸುಮಾರು ನಾಲ್ಕೈದು ದಿನಗಳಿಂದ ಅಪಘಾತವಾಗಿ ಬಿದ್ದು ನರಳಾಡುತ್ತಿರುವ ಬಗ್ಗೆ ಸ್ಥಳೀಯರಾದ ಸುಜಿತ್ ಬಾಳೆಹೊಳೆ ಮತ್ತು ಅವರ ಗೆಳೆಯರು ವಿಶ್ವಹಿಂದೂ ಪರಿಷತ್ತ್ ಬಜರಂಗದಳ ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಕುಲಾಲ್ ಅವರಿಗೆ ವಿಷಯ ತಿಳಿಸಿದರು.
ತಕ್ಷಣ ಸ್ಪಂದಿಸಿದ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ಕೊಡಿಸಿದರು. ನಂತರ ಸ್ಥಳೀಯರ ಸಹಕಾರದಿಂದ ಪಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಳೆಹೊಳೆಯ ಪಶು ಆಸ್ಪತ್ರೆಗೆ ಬಿಡಲಾಗಿದೆ. ಈ ಸಂಧರ್ಭದಲ್ಲಿ ಪಶು ವೈದ್ಯರಾದ ನಾಗೇಂದ್ರ ಅವರು ಗಜೇಂದ್ರ ಗೊರಸುಕುಡಿಗೆ ಆಟೋ ಸಂದೀಪ್ ಮತ್ತು ಇತರರು ಇದ್ದರು.