ಕಳಸ ಲೈವ್ ವರದಿ
ಯಾವುದೇ ಕೆಲಸವನ್ನು ಕಷ್ಟ ಅಂತ ತಿಳಿದುಕೊಳ್ಳದೆ ಅದನ್ನು ಇಷ್ಟ ಪಟ್ಟು ಮಾಡಿದಾಗ ಮಾತ್ರ ಜೀವನದಲ್ಲಿ ಎಲ್ಲೂ ಕಷ್ಟ ಎಂದು ಎಣಿಸುವುದಿಲ್ಲ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಹೇಳಿದರು.
ಇಲ್ಲಿಯ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಗುರುವಾರ ನಡೆದ ಸರಸ್ವತಿ ಪೂಜಾ ಸಮಾರಂಭದ ಕೃತಂ ಸ್ಮರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಷ್ಟ ಅನ್ನೋ ಪದವನ್ನು ಮನಸ್ಸಿನಿಂದ ತೆಗೆದು ಹಾಕಿ,ಇಷ್ಟ ಅನ್ನೋದನ್ನ ಮನಸ್ಸಿನಲ್ಲಿ ಕೂರಿಸಿ ಎಂದು ಹೇಳಿದರು.
ಹೊರನಾಡಿನ ರಾಜಗೋಪಾಲ ಜೋಷಿ ಮಾತನಾಡಿ ಹುಟ್ಟಿನಿಂದ ಬರುವಂತದ್ದು ಅಸ್ತಿತ್ವ ಆದರೆ ವ್ಯಕ್ತಿತ್ವವನ್ನು ನಾವು ಉಳಿಸಿಕೊಳ್ಳಬೇಕು.ಯಾವ ರೀತಿಯಲ್ಲಿ ನಾವು ವ್ಯಕ್ತಿತ್ವವನ್ನು ಉಳಿಸಿಕೊಳ್ಳುತ್ತೇವೆಯೋ ಆ ರೀತಿಯಲ್ಲಿ ನಾವು ಸಮಾಜದಲ್ಲಿ ನಮ್ಮ ಗೌರವ ಮತ್ತು ಶ್ರೇಷ್ಟತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಭಾರತದ ಸಂಸ್ಕಾರ ಸಂಸ್ಕøತಿ, ಪರಂಪರೆಯನ್ನು ಆಂಗ್ಲ ಮಾಧ್ಯಮ ಶಾಲೆಗಳು ಹಾಳು ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಕಾರ, ಸಂಸ್ಕøತಿಗೆ ಪ್ರಬೋಧಿನಿಯಂತ ಶಾಲೆಗಳು ಅದಕ್ಕೆ ಜೀವ ಕೊಡುತ್ತಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಪ್ರಬೋಧಿನಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ.ವಿ.ವೆಂಕಟಸುಬ್ಬಯ್ಯ, ಶಿವಮೊಗ್ಗ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಹಯವದನ ಉಪಾಧ್ಯಾಯ,ಕಾರ್ಯದರ್ಶಿ ರಾಘವೇಂದ್ರ ಭಟ್, ಹೊರನಾಡಿನ ಪ್ರತಿಭಾ ಆರ್ ಜೋಷಿ, ಶಾಲಾ ಮುಖ್ಯ ಶಿಕ್ಷ ಆನಂದ್ ಇತರರು ಇದ್ದರು.