ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಗುರುವಾರ ನಡೆದ ಸರಸ್ವತಿ ಪೂಜಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಡೆದ ಕೃತಂಸ್ಮರ ಕಾರ್ಯಕ್ರಮದಲ್ಲಿ ಸೇರಿದ ಜನರು ಕೆಲ ಹೊತ್ತು ಭಾವನಾತ್ಮಕ ಸನ್ನಿವೇಶ ಉಂಟಾಯಿತು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಕೈ ಹಿಡಿದು ವೇದಿಕೆಗೆ ಕರೆತಂದು, ತಮ್ಮ ಹೆತ್ತವರ ಪಾದ ಪೂಜೆ ಮಾಡಿ, ಹಣೆಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ತಮ್ಮ ಹೆತ್ತವರಿಗೆ ನೋವಾಗದಂತೆ ಜೀವನವಿಡೀ ಎಚ್ಚರ ವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ ಸನ್ನಿವೇಶ ಸೇರಿದ ಜನರು ಭಾವುಕರಾದರು.
ಇದೇ ಸಂದರ್ಭದಲ್ಲಿ ಮಕ್ಕಳು ಹಿನ್ನಲೆಯಾಗಿ ಅಪ್ಪ, ಅಮ್ಮನ ಬಗೆಗಿನ ಹಾಡುಗಳನ್ನು ಹೇಳಿ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಪುಷ್ಠಿ ತುಂಬಿದರು.