ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮುರೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಶ್ರಮದಾನಕ್ಕೆ ಶೌರ್ಯ ತಂಡದ ಸ್ವಯಂ ಸೇವಕರು ಕೈಜೋಡಿಸಿದರು.
ದೇವಸ್ಥಾನದ ಆವರಣದಲ್ಲಿದ್ದ ಗಿಡ ಗಂಟಿಗಳನ್ನು ಕಳೆ ಹೊಡೆಯುವ ಯಂತ್ರದಿಂದ ತೆಗೆದು, ದೇವಸ್ಥಾನ ಮತ್ತು ಪಕ್ಕದ ಸಭಾಭವನ ತೊಳೆದು ಶುಚಿಗೊಳಿಸಲಾಯಿತು. ನಂತರ ಕಲಶ ಚೊಂಬು, ದೀಪದ ಕಂಬ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ತೊಳೆದುಕೊಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮು ಭಟ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಸರಿಕಲ್ಲು ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿ ವಿನುತ, ಒಕ್ಕೂಟದ ಅಧ್ಯಕ್ಷರಾದ ಸತೀಶ್ ಎಂ, ದೇವಸ್ಥಾನದ ವ್ಯವಸ್ಥಾಪಕರಾದ ರಾಜಪ್ಪ ಗೌಡ್ರು, ಶೌರ್ಯ ಸಂಯೋಜಕರಾದ ಬಿ.ಕೆ ಮಹೇಶ್, ಶೌರ್ಯ ಸದಸ್ಯರಾದ ಸುಧಾಕರ್, ಸತೀಶ್ ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು. ಸ್ವಚ್ಛತೆಯಲ್ಲಿ ಭಾಗವಹಿಸಿದವರಿಗೆ ಎಡಮುರ ರಾಜಣ್ಣ ಊಟದ ವ್ಯವಸ್ಥೆ ಮಾಡಿದರು.