ಕಳಸ ಲೈವ್ ವರದಿ
ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮೃತ ಬಾಲಕಿಯ ಮನೆಗೆ ಬಜರಂಗದಳ ಕಾರ್ಯಕರ್ತರು ಸೋಮವಾರ ಬೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿ ಈ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಆತ್ಮಹತ್ಯೆಗೆ ಕಾರಣಕರ್ತನಾದ ಯುವಕನನ್ನು ಶೀಘ್ರವೇ ಬಂಧಿಸಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.ಭಜರಂಗದಳ ಸಂಘಟನೇ ಹೆಣ್ಣು ಮಕ್ಕಳ ರಕ್ಷಣೆ ಮಾಡುವ ಸಂಘಟನೆ ಹೊರತು ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುವವರಲ್ಲ.
ತಪ್ಪು ಯಾರೇ ಮಾಡಿದರು ತಪ್ಪೇ ಈ ವಿಷಯದಲ್ಲಿ ಸಂಘಟನೆ ಸಂಪೂರ್ಣವಾಗಿ ಮೃತಳ ಕುಟುಂಬಕ್ಕೆ ಬೆಂಬಲವಾಗಿ ನಿಂತು ನ್ಯಾಯ ಕೊಡಿಸುವ ಭರವಸೆ ನೀಡಿದ್ದೇವೆ ಎಂದು ಬಜರಂಗದಳ ಜಿಲ್ಲಾ ಗೊ ರಕ್ಷಕ್ ಪ್ರಮುಖ್ ಅಜಿತ್ ಕಳಸ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಸಂಯೋಜಕ ಸಂತೋಷ್ ಬೆಟ್ಟಿಗೆರೆ ಸಂಸೆ, ಸಹ ಸಂಯೋಜಕ ಸುಜಿತ್, ಸಂಸೆ ಘಟಕದ ಗೋ ರಕ್ಷಕ ಪ್ರಮುಖ ವಿನೋದ್, ಸಾಮಾಜಿಕ ಜಾಲತಾಣ ಪ್ರಮುಖ ಸುರೇಶ್ ಇದ್ದರು.