ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಚರಣ್ ಎಸ್ ಭಂಡಾರಿ ಇವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಕಾರ್ಯದರ್ಶಿಯಾಗಿ ಶ್ರೀಕಾಂತ್, ಸಹ ಕಾರ್ಯದರ್ಶಿಯಾಗಿ ಸತೀಶ್, ಸಂವಹನಾ ಕಾರ್ಯದರ್ಶಿಯಾಗಿ ಸುಧಾಕರ್, ಖಜಾಂಚಿಯಾಗಿ ಮಧು ಗೌಡ, ಉಪಾಧ್ಯಕ್ಷರಾಗಿ ಸಂತೋಷ್ ಎಂ ಎಸ್, ಸುಧೀರ್, ಮುರಳಿ, ಶಿವಪ್ರಸಾದ್ ಎಂ, ಸುನಿಲ್ ಆಚಾರ್ಯ ಇವರನ್ನು ಆಯ್ಕೆ ಮಾಡಲಾಗಿದೆ.
ಪದಗ್ರಹಣ ಕಾರ್ಯಕ್ರಮವು ಜನವರಿ 24ರಂದು ಆನೆಗುಡ್ಡ ಹೋಂ ಸ್ಟೇಯಲ್ಲಿ ಸಂಜೆ ಆರು ಗಂಟೆಗೆ ನಡೆಯಲಿದೆ ಎಂದು ಜೆಸಿಐ ಅಧ್ಯಕ್ಷ ಹೆಚ್.ಆರ್.ಪ್ರಶಾಂತ್ ತಿಳಿಸಿದ್ದಾರೆ.