ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕುಂಬ್ರಿಯ ಬಾಲಕಿಯ ಆತ್ಮಹತ್ಯೆಗೆ ಕಾರಣವೆಂದು ಆರೋಪ ಹೊತ್ತಿರುವ ಕಾರಗದ್ದೆಯ ನಿತೇಶ್ಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಳಸ ಪಿಜೆಪಿ ಯುವ ಮೋಚಾ ಅಧ್ಯಕ್ಷ ಬಿ.ಕೆ.ಮಹೇಶ್ ಸ್ಪಷ್ಟ ಪಡಿಸಿದ್ದಾರೆ.
ಬಾಲಕಿಯ ಆತ್ಮಹತ್ಯೆಗೆ ಕಾರಣಕರ್ತ ಎಂದು ಆರೋಪ ಹೊತ್ತಿರುವ ನಿತೇಶ್ ಬಿಜೆಪಿ ಪಕ್ಷದವನು ಎಂದು ಪ್ರಚಾರ ಪಡಿಸಲಾಗುತ್ತಿದೆ. ಆದರೆ ಆತ ಬಿಜೆಪಿ ಪಕ್ಷದಲ್ಲಿ ಆತನಿಗೆ ಯಾವುದೇ ಹುದ್ದೆಗಳು ಇರಲಿಲ್ಲ. ಅಲ್ಲದೆ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ತಪ್ಪು ಯಾರು ಮಾಡಿದ್ರೂ ತಪ್ಪೆ. ಆತನ ರಕ್ಷಣೆಗೆ ನಾವು ಖಂಡಿತಾ ನಿಲ್ಲುವುದಿಲ್ಲ. ಬಾಳಿ ಬದುಕಬೇಕಾಗಿದ್ದ ಬಾಲಕಿಯ ಬಾಳಿನಲ್ಲಿ ಪ್ರೀತಿಯ ಚೆಲ್ಲಾಟವಾಡಿ ಆತ್ಮಹತ್ಯೆಗೆ ಕರಣಕರ್ತನಾದ ನಿತೇಶ್ ನನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವು ಕೂಡ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.