ಕಳಸ ಲೈವ್ ವರದಿ
ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ಎಸ್.ಕೆ.ಮೇಗಲ್ ವಾಟೇಹಳ್ಳ ಲೋಕಪ್ಪ (60) ಎಂಬುವವರು ಅಡಕೆ ಎಲೆ ಚುಕ್ಕಿ ರೋಗದಿಂದ ಬೇಸೆತ್ತು ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ಪತ್ನಿ ಲಲಿತ ಇವರು ನೀಡಿದ ದೂರಿನ ಪ್ರಕಾರ ಸಂಸೆ ಗ್ರಾಮದ ಸ.ನಂ 252 ರಲ್ಲಿ 3 ಎಕರೆ ಜಮೀನಿದ್ದು ಜಮೀನಿನಲ್ಲಿ ಅಡಿಕೆ ಕಾಫಿ ಮತ್ತು ಕಾಳು ಮೆಣಸು ಕೃಷಿ ಮಾಡಿದ್ದೇವೆ. ಈಗ್ಗೆ 2 ವರ್ಷ ಗಳಿಂದ ಮಳೆ ಜಾಸ್ತಿಯಾಗಿ ಬೆಳೆಗಳು ನಾಶ ವಾಗಿದ್ದರಿಂದ ಮತ್ತು ಅಡಿಕೆಗೆ ಎಲೆ ಚುಕ್ಕಿ ರೋಗ ಮತ್ತು ಕಾಳು ಮೆಣಸಿಗೆ ಸೊರಗು ರೋಗ ಬಂದು ಬೆಳೆ ಬೆಳೆಯದೆ ಮುಂದಿನ ಜೀವನ ಹೇಗೆ ನಡೆಸುವುದು ಮಕ್ಕಳ ಮದುವೆ ಹೇಗೆ ಮಾಡುವುದು ಎಂದು ಮನಸ್ಸಿನಲ್ಲಿಯೇ ಬೇಸರ ಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ಸಂಜೆ 5-30 ಗಂಟೆಯ ಸಮಯಕ್ಕೆ ತೋಟಕ್ಕೆ ಹೊಡೆಯಲು ತಂದಿಟ್ಟಿದ್ದ ಕಳೆನಾಶಕವನ್ನು ಕುಡಿದು ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.