ಕಳಸ ಲೈವ್ ವರದಿ
ತಾಲೂಕಿನ ತನೂಡಿ ಗ್ರಾಮದ ಹೊಸಗಿನಿ ಎಂಬಲ್ಲಿಯ ವಿನಯ(28) ಎಂಬುವವರು ಕೊಪ್ಪದಲ್ಲಿರುವ ತಂಗಿ ಮನೆಗೆ ಹೋಗಿ ಬರುತ್ತೇನೆಂದು ಬೈಕ್ನಲ್ಲಿ ಹೋದವರು ನಾಪತ್ತೆಯಾಗಿದ್ದಾರೆ.
ವಿನಯ್ ತಂದೆ ನಾರಾಯಣ ಎಂಬುವವರು ಕಳಸ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ ನನ್ನ ಮಗ ಜನವರಿ 6 ರಂದು 3.30ರ ಸಮಯದಲ್ಲಿ ಕೊಪ್ಪದಲ್ಲಿರುವ ನನ್ನ ಮಗಳ ಮನೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಬೈಕ್ ನಲ್ಲಿ ಹೋದವನು ಮರಳಿ ಬಂದಿಲ್ಲ.ಮಗಳ ಮನೆಯಲ್ಲಿ ವಿಚಾರಿಸಿದರೆ ಅಲ್ಲಿಗೂ ಹೋಗಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿದೆ. ಸಂಬಂಧಿಕರ ಮನೆಗಳಲ್ಲೂ ವಿಚಾರಿಸಿದರೂ ಎಲ್ಲಿಗೂ ಹೋಗಿರುವುದಿಲ್ಲ.
ಮನೆಯಿಂದ ಹೋಗುವಾಗ ಜೀನ್ಸ್ ಪ್ಯಾಂಟ್, ಹಸಿರು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಸ್ವೆಟರ್ ಧರಿಸಿರುತ್ತಾನೆ. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾನೆ. ಆದ್ದರಿಂದ ನನ್ನ ಮಗನನ್ನು ಪತ್ತೆ ಮಾಡಿಕೊಡಿ ಎಂದು ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Related Stories
September 6, 2024