ಕಳಸ ಲೈವ್ ವರದಿ
ಇಲ್ಲಿನ ರೋಟರಿ ಕ್ಲಬ್, ಇನ್ನರ್ವೀಲ್ ಸಂಸ್ಥೆ ಹಾಗೂ ಮಂಗಳೂರಿನ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಕಾವೇರಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹೃದಯ ರೋಗಗಳ ಉಚಿತ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ವೈದ್ಯ ವಿಶ್ವನಾಥ ಪ್ರಭು ಚಾಲನೆ ನೀಡಿದರು. ಡಾ.ಪದ್ಮನಾಭ ಕಾಮತ್ ಮತ್ತು ತಂಡ ಮಂಗಳೂರು ಇವರಿಂದ ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆಯನ್ನು ನಡೆಸಿದರು.ಕಳಸ ಸುತ್ತಮುತ್ತಲಿನ ಸುಮಾರು 160 ಜನ ಇದರ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಮಹೇಂದ್ರ, ಇನ್ನರ್ ವೀಲ್ ಅಧ್ಯಕ್ಷೆ ಕವಿತಾ ಪ್ರಕಾಶ್, ಕಾರ್ಯದರ್ಶಿ ಸಂಧ್ಯಾ ರಿತೇಶ್, ಬಾಲಕೃಷ್ಣ ಭಟ್, ಕಿರಣ್ ಶೆಟ್ಟಿ, ಸಂತೋಷ್, ವಿಕ್ರಮ್, ರಿತೇಶ್ ಇದ್ದರು.