ಕಳಸ ಲೈವ್ ವರದಿ
ವಿಧಾನಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರನ್ನು ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿತು.
ಮೂಡಿಗೆರೆ ಸಮೀಪದ ಪ್ರಾಣೇಶ್ ಅವರ ಮನೆಯಂಗಳದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ತಾ.ಪಂ ಅಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ ಎಂ.ಕೆ.ಪ್ರಾಣೇಶ್ ಅವರು ಯಾವುದೇ ಒಂದು ಸಮಾಜಕ್ಕೆ ಸೀಮತಿಯವಾಗಿ ತೋರಿಸಿಕೊಳ್ಳದೆ ಪ್ರತಿಯೊಂದು ಸಮಾಜಕ್ಕೂ ಅವರ ಕೊಡುಗೆ ಅಪಾರವಾಗಿದೆ.ಕಳಸ ತಾಲ್ಲೂಕಿಗೆ ಅವರ ಕೊಡುಗೆ ಸಾಕಷ್ಠಿದೆ. ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಹೊರಡಿಸಲುವಲ್ಲಿ ಪ್ರಾಣೇಶ್ ಅವರ ಕೊಡುಗೆ ದೊಡ್ಡದು. ಕಳಸಕ್ಕೆ ಹಲವಾರು ಕೊಡುಗೆ ನೀಡಿರುವ ಪ್ರಾಣೇಶ್ ಅವರನ್ನು ಕಳಸಕ್ಕೆ ಕರೆದು ದೊಡ್ಡ ಮಟ್ಟದಲ್ಲಿ ಸನ್ಮಾನ ಮಾಡುವ ಯೋಚನೆ ಇದೆ ಎಂದರು.
ಕಳಸ ಬಿಲ್ಲವ ಸಮಾಜದ ಅಧ್ಯಕ್ಷ ಮಂಜಪ್ಪ ಪೂಜಾರಿ, ಪ್ರಮುಖರಾದ , ರಾಮಚಂದ್ರ, ಚಂದ್ರಶೇಖರ್, ರವಿ, ಪ್ರಶಾಂತ್, ಪ್ರವೀಣ್ ಪೂಜಾರಿ, ರಮೇಶ್, ಸುದರ್ಶನ್ ಇತರರು ಇದ್ದರು.