ಕಳಸ ಲೈವ್ ವರದಿ
ಕಳೆದ ನಾಲ್ಕು ತಿಂಗಳಿನಿಂದ ಕಳಸ ಭಾಗದಲ್ಲಿ ನೀಡು ಬಿಟ್ಟಿದ್ದ ಜೋಡಿ ಆನೆಗಳು ಸೋಮವಾರ ಬೆರ್ಪಟ್ಟ ಹಿನ್ನಲೆಯಲ್ಲಿ ಮತ್ತೆ ಎರಡೂ ಆನೆಗಳನ್ನು ಒಂದು ಗೂಡಿಲು ಅರಣ್ಯ ಇಲಾಖೆ ಹರ ಸಹಾಸ ಮಾಡುತ್ತಿದ್ದಾರೆ.
ಭಾನುವಾರ ರಾತ್ರಿ ಕಳಸ ಗಣಪತಿ ಕಟ್ಟೆಯಲ್ಲಿ ಎರಡೂ ಆನೆಗಳು ಒಟ್ಟಾಗಿ ಇರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.ಆದರೆ ರಾತ್ರಿ ಎರಡೂ ಆನೆಗಳು ಬೇರ್ಪಟ್ಟಿವೆ.ಒಂದು ಆನೆಯು ಅಬ್ಬುಗುಡಿಗೆ ಕಡೆ ಹೋದ್ರೆ ಇನ್ನೊಂದು ಆನೆಯು ಗಣಪತಿ ಕಟ್ಟೆಯಲ್ಲಿಯೇ ಉಳಿದಿದೆ.
ಜೋಡಿಯಿಂದ ಬೇರ್ಪಟ್ಟು ಗಣಪತಿಕಟ್ಟೆಯಲ್ಲಿ ಉಳಿದಿರುವ ಆನೆ ಇನ್ನೊಂದು ಆನೆಯ ಹುಡುಕಾಟದಲ್ಲಿದೆ.ಪರಿಣಾಮ ಬೆಳಗ್ಗಿನ ಜಾವ ವೆಂಕಟರಮಣ ದೇವಸ್ಥಾನದ ವರೆಗೂ ಒಂದು ಆನೆ ಬಂದು ನಂತರ ಗಣಪತಿಕಟ್ಟೆಯಲ್ಲಿ ಉಳಿದಿದೆ.
ಇತ್ತ ಬೇರ್ಪಟ್ಟ ಆನೆಗಳಿಂದ ತೀರಾ ತೊಂದರೆ ಉಂಟಾಗುತ್ತದೆ ಎನ್ನುವ ಆತಂಕದಲ್ಲಿ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ ಗಣಪತಿಕಟ್ಟೆಯಲ್ಲಿರುವ ಆನೆಯನ್ನು ಇನ್ನೊಂದು ಆನೆಯ ಜೊತೆಗೂಡಿಸಲು ಹರ ಸಹಾಸ ಮಾಡುತ್ತಿದ್ದಾರೆ.ಇವರೊಂದಿಗೆ ಸ್ಥಳೀಯರು ನೆರವಾಗಿದ್ದಾರೆ. ಗಣಪತಿಕಟ್ಟೆಯಲ್ಲಿ ಇರುವ ಆನೆಯು ಒಂದೆರಡು ಬಾರಿ ರಸ್ತೆ ಬದಿ ತನಕ ಬಂದು ಮತ್ತೆ ಕಾಡು ಸೇರುತ್ತಿದೆ.ಸ್ಥಳದಲ್ಲಿ ಎಸಿಎಪ್ ಜೇತನ್ ಗಸ್ತಿ, ಆರ್ಎಪ್ಒ ಸಂದಿಪ್ ಇದ್ದಾರೆ.