ಕಳಸ ಲೈವ್ ವರದಿ
ಆತ್ಮರಕ್ಷಣೆ.ಏಕಾಗ್ರತೆಯ ಕರಾಟೆ ಕಲೆ ಕರಗತವಾದಲ್ಲಿ ಶಿಸ್ತು ಬದ್ಧ ಜೀವನಕ್ಕೆ ನಾಂದಿ ಎಂದು ಕಳಸ ಪೆÇಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ.ಆರ್ ಮೋಹನ್ ಕುಮಾರ ಹೇಳಿದರು.
ಅವರು ಶನಿವಾರ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಸಭಾಂಗಣದಲ್ಲಿ ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ(ರಿ )ವತಿಯಿಂದ ಅಖಿಲ ಭಾರತೀಯ ಪೆÇಲೀಸ್ ಕ್ರೀಡಾಕೂಟ ದಲ್ಲಿ ಕಂಚಿನ ಪದಕ ಪಡೆದ ಟಿ ಎಸ್.ಗಿರೀಶ್ ರವರಿಗೆ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಕ್ರೀಡಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪೊಲೀಸ್ ವೃತ್ತಿ ಯೊಂದಿಗೆ ಚಿಕ್ಕಮಗಳೂರುನಲ್ಲಿ ವಿವೇಕಾನಂದ ಪಿಟ್ಟನೆಸ್ ಅಕಾಡೆಮಿ ಎಂಬ ಸಂಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೆಡೆಸಿಕೊಂಡು ಸೆಪ್ಟೆಂಬರ್ ತಿಂಗಳಿನಲ್ಲಿ ನವದೆಹಲಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಪ್ರತಿನಿಧಿಸಿ ಪೆಂಕಾಂಕ್ ಸಿಲತ್ ಆತ್ಮರಕ್ಷಣೆ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಮತ್ತು ಶಿಕ್ಷಣ ಕ್ಕೆ ಪೂರಕವಾಗಬಲ್ಲ ಕರಾಟೆ ತರಬೇತಿಯಿಂದ ಸಾಧಕ ರಾಗುವ ಮೂಲಕ ಭದ್ರ ಭವಿಷ್ಯ ರೂಪಿಸಲು ಸಹಕಾರಿ ಎಂದರು.
ಪದಕ ಪಡೆದ ಟಿ.ಎಸ್.ಗಿರೀಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರಾಟೆ ಕಲೆ ನಿಂತ ನೀರಾಗದೆ ಹರಿಯುವ ನೀರಾಗಬೇಕೆಂಬ ಸದುದ್ದೇಶದಿಂದ ವಿಶೇಷವಾಗಿ ಕರಾಟೆ ಕಲೆ ಕಲಿಕೆ ಗೆ ಒತ್ತು ನೀಡಲಾಗುವುದು. ಇದನ್ನು ಸದ್ಭಾಳಕೆ ಮಾಡಿಕೊಂಡು ಉತ್ತಮ ಸಾಧಕರಾಗಿ ಮೂಡಿ ಬರಲು ವಿಪುಲ ಅವಕಾಶ ಇದೆ. ಮಕ್ಕಳನ್ನು ಮೊಬೈಲ್ನಿಂದ ದೂರವಿರಿಸಲು ಸಹಕಾರಿಯಾಗುವ ಇಂತಹ ಕರಾಟೆ ತರಬೇತಿ ಶಿಬಿರದಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿ ಕೊಂಡಲ್ಲಿ ಮೊಬೈಲ್ ಬಳಕೆಯಿಂದ ದೂರವಿರಿಸಲು ಸಹಕಾರಿಯಾಗುತ್ತದೆ. ನನಗೆ ಅಭಿನಂದಿಸಿದ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ ಎಂದರು.
ಶಕುಂತಲಾ ಪ್ರಕಾಶ್,ಸಂಪನ್ಮೂಲ ವ್ಯಕ್ತಿ ಯಶವಂತ್, ಕು.ಅಕ್ಷತಾ. ಪೋಷಕರಾದ ಶ್ವೇತ,ಹರಿಧಾಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು