ಕಳಸ ಲೈವ್ ವರದಿ
44ನೇ ವರ್ಷದ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವರ ದೀಪೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಗಣಹೋಮ, ವಿಶೇಷ ಪೂಜೆ ಅನ್ನ ಸಂತರ್ಪಣೆಯು ನಡೆಯಿತು.
ಅಯ್ಯಪ್ಪ ಸ್ವಾಮಿ ದೀಪೋತ್ಸವದ ಅಂಗವಾಗಿ ಅಯ್ಯಪ್ಪ ಭಕ್ತಾಧಿಗಳು ಮತ್ತು ಮಾಲಾದಾರಿಗಳು ಕಳೆದ ಒಂದು ವಾರಗಳಿಂದ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದರು.
44 ವರ್ಷಗಳಲ್ಲಿ ಪ್ರಥಮ ಭಾರಿಯೆಂಬಂತೆ ವಿಶೇಷವಾಗಿ ಹೂಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು.ವಿದ್ಯುತ್ ದೀಪಗಳ ಅಲಂಕಾರ ಮನ ಸೆಳೆಯುವಂತಿತ್ತು.
ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ಭಕ್ತಾಧಿಗಳಿಗೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಲಾಗಿತ್ತು.
ಬಂದಿರುವ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿ ದೇವರಿಗೆ ಹಣ್ಣುಕಾಯಿ ಸಮರ್ಪಿಸಿ ಕಷ್ಟ ಕಾಲಕ್ಕೆ ಹೇಳಿರುವ ಹರಕೆಯನ್ನು ಒಪ್ಪಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.