ಕಳಸ ಲೈವ್ ವರದಿ
ಕಳಸದ ಡಾ.ಸುಪ್ರಿತ ಕೆ.ಎನ್ ಅವರ ಕಳಸ ತಾಲ್ಲೂಕಿನ ಶಾಸನಗಳು ಎಂಬ ಪುಸ್ತಕ ಗುರುವಾರ ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಕಳಸ ತಾಲ್ಲೂಕಿನಲ್ಲಿರುವ ಶಾಸನಗಳ ಬಗ್ಗೆ ಮೊತ್ತ ಮೊದಲ ಪುಸ್ತಕವು ಬಿಡುಗಡೆಗೊಂಡಿತು. ಇದೇ ಸಂದರ್ಭದಲ್ಲಿ ಡಾ. ಮೋಹನ್ ಆರ್ ಅವರ ಮಾನವ ವಿಕಾಸ ಮತ್ತು ಆದಿಮ ಸಂಸ್ಕøತಿ ಪುಸ್ತಕವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಅಶ್ವತ್ಥನಾರಾಯಣ ಇವರು ಬಿಡುಗಡೆಗೊಳಿಸಿದರು.ಕರ್ನಾಟಕ ರಾಜ್ಯ ಕನ್ನಡ ಅಧ್ಯಾಪಕರ ಸಂಗದ ಅಧ್ಯಕ್ಷ ಡಾ.ಬೆಳಕೆರೆ ಲಿಂಗರಾಜಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿ ಅಧ್ಯಕ್ಷ ಡಾ.ದೇವರಕೋಂಡಾರೆಡ್ಡಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ವಿಜಯಲಕ್ಷ್ಮೀ ಸತ್ಯಮೂರ್ತಿ, ರವಿ ಹೊಸಕೋಟೆ, ಎಲ್.ಹರ್ಷ, ಡಾ.ಮಾಗಡಿ ಗಿರೀಶ್ ಇದ್ದರು.