ಕಳಸ ಲೈವ್ ವರದಿ
ಮೂಡಿಗೆರೆ ಭಾಗದಲ್ಲಿ ಭಿಕ್ಷೆ ಬೇಡಿಕೊಂಡು ತಿರುಗಾಡುತ್ತಿದ್ದ ಅನಾಥ ವ್ಯಕ್ತಿಯನ್ನು ಕಳಸ ಘಟಕದ ಶೌರ್ಯ ತಂಡದ ಸ್ವಯಂ ಸೇವಕರು ಕಳಸದ ದಿವ್ಯ ಕಾರುಣ್ಯ ಅನಾಥಾಶ್ರಮಕ್ಕೆ ಸೇರಿಸಿದರು.
ಮೂಡಿಗೆರೆ ಭಾಗದಲ್ಲಿ ಕೆಲವು ದಿನಗಳಿಂದ ಕಿಶೋರ್ ಕುಮಾರ್ ಎಂಬ ವ್ಯಕ್ತಿಯು ಬಸ್ ಸ್ಟ್ಯಾಂಡ್ ಹಾಗೂ ಕೆಲವು ಭಾಗಗಳಲ್ಲಿ ಭಿಕ್ಷೆ ಬೇಡಿಕೊಂಡು ಅಲೆದಾಡುತ್ತಿರುವುದನ್ನು ಕಸಬಾ ಶೌರ್ಯ ಸಂಯೋಜಕರಾದ ಪ್ರವೀಣ್ ಪೂಜಾರಿ ವಿಚಾರಿಸಿ, ಅವರಿಗೆ ಸಂಬಂಧಿಕರು ಯಾರು ಇಲ್ಲದಿರುವುದನ್ನು ತಿಳಿದ ನಂತರ ಮೂಡಿಗೆರೆ ಪೆÇಲೀಸ್ ಠಾಣೆಗೆ ಕರೆತಂದು ಅಲ್ಲಿ ವಿಚಾರಿಸಿ, ಪೆÇಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಮೂರ್ತಿ ಅವರೊಂದಿಗೆ ಚರ್ಚಿಸಿ ಕಾದಗದ್ದೆ ಅನಾಥಾಶ್ರಮಕ್ಕೆ ಬಿಡಲು ತೀರ್ಮಾನಿಸಲಾಯಿತು. ನಂತರ ಆಶ್ರಮಕ್ಕೆ ಸೇರಿಸಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಶಿವಾನಂದ್, ಒಕ್ಕೂಟದ ಅಧ್ಯಕ್ಷರು ಪ್ರೇಮ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಯ ಸದಾನಂದ, ಕಳಸ ಘಟಕದ ಸಂಯೋಜಕರಾದ ಬಿಕೆ ಮಹೇಶ್, ಸಂಯೋಜಕ ಅಜಿತ್, ಶೌರ್ಯ ತಂಡದ ಸದಸ್ಯರಾದ ಸತೀಶ್ ಬಿ ಎಂ, ಹೆರಾಲ್ಡ್, ಶಿವರಾಜ್, ಚಂದ್ರು, ಸುಧಾಕರ್ ಇದ್ದರು.