ಕಳಸ ಲೈವ್ ವರದಿ
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಅವರನ್ನು ಅವರ ಆತ್ಮೀಯರ ಬಳಗ ಗೌರವಿಸಿದರು.
ಸ್ನೇಹಿತರಾದ ಅ.ರಾ.ರಾಧಕೃಷ್ಣ, ಪ್ರೇಂ ಕುಮಾರ್, ಅ.ರಾ. ಸತೀಶ್ಚಂದ್ರ, ಶೇಖರ ಶೆಟ್ಟಿ ಕಾಲೇಜಿಗೆ ತೆರಳಿ ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರೇಂ ಕುಮಾರ್ ಮಾತನಾಡಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಸದಾಕಾಲ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿನಯಕುಮಾರ್ ಶೆಟ್ಟಿ ಈಗ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿರುವುದು ನಮಗೆ ಹೆಮ್ಮೆ ತಂದಿದೆ ಇವರ ಮುಂದಿನ ಜೀವನವೂ ಕೂಡ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.