ಕಳಸ ಲೈವ್ ವರದಿ
ತಾಲ್ಲೂಕಿನ ತೋಟದೂರು ಗ್ರಾಮ ವ್ಯಾಪ್ತಿಯ ಕುಳಿಹಿತ್ತಲು ಪ್ರದೇಶದಲ್ಲಿ ಕಾಡುಕೋಣದ ದಾಳಿಯಿಂದ ಕೃಷಿಕ ಸೋಮಶೇಖರ್ ಎಂಬುವವರು ಗುರುವಾರ ಸ್ಥಳದಲ್ಲೇ ಮೃತಪಟ್ಟಿದ್ದರು.
ಕಾಡುಕೋಣ ದಾಳಿಯಿಂದ ಮೃತ ಪಟ್ಟ ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ಎಸಿಎಪ್ ಚೇತನ್ ಗಸ್ತಿ, ತಹಶೀಲ್ದಾರ್ ನಂದ ಕುಮಾರ್, ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮೃತ ದೇಹವನ್ನು ತೆಗೆಯಲು ಬಿಡದೆ ಸ್ಥಳಕ್ಕೆ ಡಿಎಪ್ಒ ಬರಬೇಕು ಎಂದು ಪಟ್ಟು ಹಿಡಿದು ಕುಳಿತರು. ನಮಗೆ ಸೂಕ್ತ ಪರಿಹಾರ ನೀಡಿ ನಾವು ಇಲ್ಲಿಂದ ಹೋಗ್ತೇವೆ ನೀವು ಅರಣ್ಯ ಮಾಡಿ ಪ್ರಾಣಿಗಳನ್ನೇ ಸಾಕಿ. ಇಲ್ಲಾಂದ್ರೆ ಮನುಷ್ಯರನ್ನು ಜೀವಿಸಲು ಬಿಡಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.ಇಲಾಖಾ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಕೆಲವರು ಅಧಿಕಾರಿಗಳ ಹಲ್ಲೇಗೂ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅಧಿಕಾರಿಗಳಿಗೆ ರಕ್ಷಣೆ ಒದಗಿಸಿದರು.
ಸಂಜೆಯಾಗುತ್ತಿದ್ದಂತೆ ಸ್ಥಳಕ್ಕೆ ಡಿಎಪ್ಒ ನೀಲೇಶ್ ಸಿಂದೆ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಹಾಗೂ ಮೃತರ ಪುತ್ರಿಗೆ ಸರ್ಕಾರಿ ಕೆಲಸ ಕೊಡಿಸಬೇಕು ಅಲ್ಲದೆ ಇಲ್ಲಿಯ ಕಾಡು ಕೋಣಗಳನ್ನು ಸ್ಥಳಾಂತರ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಒಪ್ಪದಿದ್ದರೆ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಎಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪಿದ ಡಿಎಪ್ಒ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಕಾಡು ಕೋಣಗಳನ್ನು ಸ್ಥಳಾಂತರಿಸಲು ನಾಳೆನೇ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.