ಕಳಸ ಲೈವ್ ವರದಿ
ಕಾಡುಕೋಣ ದಾಳಿ ಮಾಡಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಿಹಿತ್ಲು ಎಂಬಲ್ಲಿ ನಡೆದಿದೆ.
ತೋಟದೂರು ಕುಳಿಹಿತ್ಲು ಸೋಮಶೇಖರ(45) ಮೃತ ವ್ಯಕ್ತಿ.
ಸೋಮಶೇಖರ್ ಅವರು ಗುರುವಾರ 10.30ರ ಸಮಯದಲ್ಲಿ ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕಾಡುಕೋಣವೊಂದು ಅವರ ಮೇಲೆ ಏಕಾಏಕಿ ದಾಳಿ ಮಾಡಿ ತಿವಿದು ಹಾಕಿದೆ.
ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Related Stories
September 6, 2024