ಕಳಸ ಲೈವ್ ವರದಿ
ಹಿರೇಬೈಲಿನ ವಿಘ್ನೇಶ್ವರ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಅಯ್ಯಪ್ಪ ಸ್ವಾಮಿ ದೀಪೆÇೀತ್ಸವದ ಪ್ರಯುಕ್ತ ತಾಳಮದ್ದಲೆ ಆಯೋಜಿಸಲಾಗಿದೆ.
ಜನವರಿ ಒಂದರಂದು ರಾತ್ರಿ 9ರಿಂದ 12ರವರೆಗೆ ಸಾಂಸ್ಕ್ರತಿಕ ಮಂದಿರಲ್ಲಿ ಮಾಲಾದಾರಿಗಳ ಸೇವಾರ್ಥದಿಂದ ಪ್ರಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಜಾಂಬವತಿ ಕಲ್ಯಾಣ ಎಂಬ ಪ್ರಸಂಗವನ್ನು ಬಡಗುತಿಟ್ಟಿನ ಶೈಲಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಖ್ಯಾತ ಕಲಾವಿದರಾದ ಹರಿಹರಪುರ ಶಿವಶಂಕರ್, ಹೊರಟಿಮನೆ ಸುಬ್ರಮಣ್ಯ, ನಾಗರಕುಡಿಗೆ ಕೃಷ್ಣಮೂರ್ತಿ, ಪವನ್ ಕಿರಣಕೆರೆ ಹಿಮ್ಮೇಳದಲ್ಲಿ ಮತ್ತು ವಿಟ್ಲದ ರಾಧಾಕೃಷ್ಣ ಕಲ್ಚಾರ್, ಹಳುವಳ್ಳಿಯ ಗಣೇಶ್ ಭಟ್ಟ, ಬಳಂತಿಮೊಗರಿನ ಹರೀಶ್, ಸಂಪಾಜೆಯ ಜಬ್ಬಾರ್ ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.