ಕಳಸ ಲೈವ್ ವರದಿ
ಕಳಸದ ಡಾ.ಸುಪ್ರಿತ ಕೆ.ಎನ್ ಅವರ ಕಳಸ ತಾಲ್ಲೂಕಿನ ಶಾಸನಗಳು ಎಂಬ ಪುಸ್ತಕ ಇದೇ ತಿಂಗಳ 29ಕ್ಕೆ ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಅಂದು ಸುಪ್ರಿತ ಅವರ ಪತಿ ಡಾ.ಮೋಹನ್ ಆರ್ ಅವರ ಮಾನವ ವಿಕಾಸ ಮತ್ತು ಆದಿಮ ಸಂಸ್ಕøತಿ ಪುಸ್ತಕವು ಬಿಡುಗಡೆಗೊಳ್ಳಲಿದೆ.
ಸುಪ್ರೀತ ಕೆ.ಎನ್, ಅವರು ಕಳಸದಲ್ಲಿ 1991ರಲ್ಲಿ ಜನಿಸಿದರು. ಇಲ್ಲಿಯೇ ಪದವಿಯವರೆಗೂ ಶಿಕ್ಷಣವನ್ನು ಮುಗಿಸಿ, ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂದು ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದರು. ಸ್ನಾತಕೋತ್ತರ ಪದವಿಯನ್ನು ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಷಯದಲ್ಲಿ ಹಾಗೂ ಪಿ.ಜಿ. ಡಿಪೆÇ್ಲಮವನ್ನು ವಸ್ತುಸಂಗ್ರಹಾಲಯ ಮತ್ತು ಪುರಾತತ್ವ ವಿಷಯದಲ್ಲಿ ಪೂರ್ಣಗೊಳಿಸಿದರು. ತದನಂತರ ‘ಕರ್ನಾಟಕ ಗ್ರಾಮ ಚರಿತ್ರಾ ಕೋಶ’ ಪ್ರಾಜೆಕ್ಟ್ನಲ್ಲಿ ಸಂಶೋಧನಾ ಸಹಾಯಕಿಯಾಗಿ 2014-15ರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಕಳಸ ಪರಿಸರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಷಯಕ್ಕಾಗಿ 2020ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಕಳಸ ಪ್ರದೇಶದ ಇತಿಹಾಸ ಕುರಿತು 2013 ರಿಂದ ನಿರಂತರ ಕ್ಷೇತ್ರಕಾರ್ಯ ಕೈಗೊಂಡಿದ್ದಾರೆ ಅದರಲ್ಲಿ ಪಾಂಡವರ ಉಪ್ಪರಿಗೆಯ ಬೃಹತ್ ಶಿಲಾಯುಗ ಸಂಸ್ಕøತಿಯ ಸಮಾಧಿಗಳು, ಕಲ್ಕುಳಿಗಳು, ಮಲ್ಲಯುದ್ಧ ವೀರಗಲ್ಲು, ಚಿಂಕ ಬೇಟಿ ವೀರಗಲ್ಲು, ಅಪ್ರಕಟಿತ ಶಾಸನಗಳು ಪ್ರಮುಖವಾಗಿವೆ. ಇವುಗಳನ್ನು ಕುರಿತು ಕಾಲ ಕಾಲಕ್ಕೆ ರಾಷ್ಟ್ರೀಯ ಮತ್ತು ಸ್ಥಳೀಯ ವಿಚಾರ ಸಂಕಿರಣಗಳಲ್ಲಿ ಲೇಖನ ಮಂಡನೆ ಜೊತೆಗೆ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇದರ ಜೊತೆ ಜೊತೆಯಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಜನ ಮನಗಳನ್ನು ತಲುಪುವಂತೆ ಮಾಡಿದ್ದಾರೆ. ಮುಂದುವರಿದು ಸ್ಥಳೀಯ ಇತಿಹಾಸವನ್ನು ಸ್ಥಳೀಕರಿಗೆ ಅರ್ಥೈಸುವ ಜೊತೆಗೆ ವಿದ್ಯಾರ್ಥಿಗಳಿಗೆ ಇತಿಹಾಸ, ಸ್ಮಾರಕಗಳ ರಕ್ಷಣೆಯ ಕುರಿತು ಜಾಗೃತ ಕಾರ್ಯಕ್ರಮ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ.