ಕಳಸ ಲೈವ್ ವರದಿ
ಕಳಸದ ಖ್ಯಾತ ವೈದ್ಯ ಡಾ.ವಿಶ್ವನಾಥ ಪ್ರಭು ಅವರನ್ನು ಜಿಎಸ್ಬಿ ಸಮಾಜವು ಗುರುವಾರ ರಾತ್ರಿ ಸನ್ಮಾನಿಸಿತು.
1972ರಿಂದ ಕಳಸದಲ್ಲಿ ಪ್ರಭುಸ್ ಕ್ಲಿನಿಕ್ ಎಂಬ ಹೆಸರಿನಲ್ಲಿ ವೈಧ್ಯಕೀಯ ಸೇವೆಯನ್ನು ಪ್ರಾರಂಭಿಸಿ, ವೈಧ್ಯಕೀಯ ಸೇವಾ ವೃತ್ತಿಗೆ ತನ್ನ ಜೀವನವನ್ನು ಮುಡಿಪಾಗಿಡಿಸಿ ರೋಗಿಗಳ ಶುಶ್ರೂಷೆಯಲ್ಲಿಯೇ ಸಾರ್ಥಕತೆಯನ್ನು ಕಂಡ ಡಾ.ವಿಶ್ವನಾಥ ಪ್ರಭು ಕಳಸದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿ 50 ವರ್ಷ ಸಂದ ಸಂದರ್ಭದಲ್ಲಿ ಜಿಎಸ್ಬಿ ಸಮಾಜ ಅವರನ್ನು ಅಭಿಮಾನದಿಂದ ಗೌರವಿಸಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ವಿಶ್ವನಾಥ ಪ್ರಭು, ಉಮಾ ವಿ. ಪ್ರಭು ದಂಪತಿಯನ್ನು ಅಲಂಕೃತ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಅನೇಕ ಗ್ರಾಮಸ್ಥರು ವೈದ್ಯರಿಗೆ ಹೂಮಾಲೆ ಹಾಕಿ ನಮಸ್ಕರಿಸಿದರು.
ಆನಂತರ ಜಿಎಸ್ಬಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವನಾಥ ಪ್ರಭು ಅವರನ್ನು ಜಿಎಸ್ಬಿ ಸಮುದಾಯದ ಹಿರಿಯರು ಸನ್ಮಾನಿಸಿದರು.
ವೇದಮೂರ್ತಿ ಚೆಂಪಿ ಶ್ರೀಕಾಂತ ಭಟ್, ಮಂಗಳೂರು ಕೆನರಾ ಹೈಸ್ಕೂಲ್ ಕಾರ್ಯದರ್ಶಿ ರಂಗನಾಥ ಭಟ್, ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಯಜ್ಞೇಶ್ ಮೂರ್ತಿ, ಶಾಂತಾರಾಮ ಪ್ರಭು, ಗೋಪಿನಾಥ ಪೈ, ಅರುಣ್ ಪೈ, ಹಿರಿಯರಾದ ಕಮಲಾಕ್ಷ ಶೆಣೈ, ರಾಮ ಹೆಗಡೆ, ತಿಮ್ಮರಸ ಪುರಾಣಿಕ್, ರಾಮಚಂದ್ರ ಶಾನುಭೋಗ್, ವಿವೇಕಾನಂದ ಭಟ್, ಬಾಲಕೃಷ್ಣ ಪ್ರಭು ಮತ್ತಿತರರು ಇದ್ದರು.