ಕಳಸ ಲೈವ್ ವರದಿ
ಕಳೆದ ಹತ್ತು ವರ್ಷಗಳ ಹಿಂದೆ ಕಳಸದಲ್ಲಿ ಪ್ರಾರಂಭಗೊಂಡ ಜೆಸಿಐ ಸಂಸ್ಥೆಯು ಗುರುವಾರ ತಮ್ಮ ದಶಮಾನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸಿದರು.
ಕಳೆದ ಹತ್ತು ವರ್ಷಗಳಿಂದ ಈ ಸಂಸ್ಥೆಯು ಜಗದೀಶ್ ನಾಯ್ಕ್, ಸುದೀಶ್ ಸುವರ್ಣ, ಸುರೇಂದ್ರ, ಶಿವರಾಮ ಪಂಡಿತ್, ಬಿ.ಕೆ.ಮಹೇಶ್, ಚಂದ್ರಪ್ಪ, ಪ್ರಕಾಶ್ ಕುಮಾರ್, ಕೆ.ಸಿ.ಮಹೇಶ್, ಅಶೋಕ್ ಜಾವಳಿ, ಪ್ರಶಾಂತ್ ಹೆಚ್.ಆರ್ ಹೀಗೆ ಹತ್ತು ಅಧ್ಯಕ್ಷರುಗಳ ಕೊಡುಗೆಯನ್ನು ಸಂಸ್ಥೆಯು ನೀಡಿದೆ.
ಕಳಸ ದುರ್ಗಾ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಕೆಕೆಬಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್ ಉದ್ಘಾಟಿಸಿದರು.
ಕಳಸ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಗೋಪಿನಾಥ ಪೈ, ಪ್ರಬೋಧಿನಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಭಟ್, ಜೇನು ಕೃಷಿ ತಜ್ಞ ವಲ್ಲಿಕುಡಿಗೆ ಚಂದ್ರಶೇಖರ್, ಹಾಸ್ಯ ಕಲಾವಿದ ಗಜೇಂದ್ರ ಮರಸಣಿಗೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆನಂತರ ಉಡುಪಿಯ ಅಭಿನಯ ಕಲಾವಿದರು ಶಾಂಭವಿ ಎಂಬ ಸಾಮಾಜಿಕ ತುಳು ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ್ ಹೆಚ್.ಆರ್ ವಹಿಸಿದ್ದರು. ವಲಯಾಧ್ಯಕ್ಷ ಕುನಾಲ್ ಮಾನಕ್ ಚಂದ್ ವಲಯ ಉಪಾಧ್ಯಕ್ಷೆ ಮಾಯಾ ಗಿರೀಶ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್, ಸ್ಥಾಪಕಾಧ್ಯಕ್ಷ ಜಗದೀಶ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ಅಶೋಕ್ ಜಾವಳಿ, ಕಾರ್ಯದರ್ಶಿ ಶ್ರೀಕಾಂತ್, ಕಾರ್ಯಕ್ರಮ ನಿರ್ದೇಶಕ ಕೆ.ಸಿ.ಮಹೇಶ್ ಇದ್ದರು.