ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಿವಿಧ ಇಲಾಖೆಗಳಿಗೆ ಭೂಮಿ ಮಂಜೂರಾಗಿದ್ದ ಭೂಮಿಯಲ್ಲಿರುವ ಮರವನ್ನು ಕಡಿಯಲು ಒಂದು ವಾರದೊಳಗೆ ಪ್ರಕ್ರೀಯೆ ಆರಂಬಿಸದಿದ್ದಲ್ಲಿ ಮುಂದಿನ ಸೋಮವಾರದಿಂದ ಮತ್ತೆ ಪ್ರತಿಭಟನೆ ಪ್ರಾರಂಭಿಸುತ್ತೇವೆ ಎಂದು ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಿವಿಧ ಇಲಾಖೆಗಳಿಗೆ ಭೂಮಿ ಮಂಜೂರಾಗಿದ್ದ ಭೂಮಿಯ ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೋಮವಾರ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಒಂದು ವಾರದೊಳಗೆ ಅನುಮತಿಯನ್ನು ಪಡೆದು ಮರ ತೆರವಿಗೆ ಮುಂದಾಗುತ್ತೇವೆ ಎಂದು ಹೇಳಿದ ಭರವಸೆಯೊಂದಿಗೆ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದೇವೆ.
ಆದರೆ ಅಲ್ಲಿ ಹಾಕಿರುವ ಟೆಂಟ್ ಗಳನ್ನು ನಾವು ತೆರವು ಮಾಡಲಿಲ್ಲ. ಇಲಾಖೆ ಹೇಳಿದ ಮಾತಿನಂತೆ ನಡೆದುಕೊಳ್ಳದಿದ್ದರೆ ಮುಂದಿನ ಸೋಮವಾರದಿಂದ ಅದೇ ಪ್ರದೇಶದಲ್ಲಿ ಮತ್ತೆ ಪ್ರತಿಭಟನೆ ಮಾಡುವುದಲ್ಲದೆ. ನಾವೇ ಮರಗಳನ್ನು ಕಡಿಯಲು ಮುಂದಾಗುತ್ತೇವೆ ಎಂದು ಕಳಸ ಲೈವ್ ಗೆ ಮಾಹಿತಿ ನೀಡಿದ್ದಾರೆ.