ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಿವಿಧ ಇಲಾಖೆಗಳಿಗೆ ಭೂಮಿ ಮಂಜೂರಾಗಿದ್ದು, ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೋಮವಾರ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು.
ಸಂಸೆ ಗ್ರಾಮ ಸ.ವಂ 265ರಲ್ಲಿ 2019ನೇ ಇಸವಿಯಲ್ಲಿ 12 ಎಕರೆ 10ಗುಂಟೆ ಭೂಮಿ ಮಂಜೂರಾತಿ ಆಗಿದ್ದು, ಇದರಲ್ಲಿ ನಿವೇಶನಕ್ಕೆ 5 ಎಕರೆ, ಆಸ್ಪತ್ರೆಗೆ 3 ಎಕರೆ, ಪೊಲೀಸ್ ವಸತಿ ಗೃಹಕ್ಕೆ 2 ಎಕರೆ, ಸಾರ್ವಜನಿಕ ಸಮುದಾಯ ಮಂದಿರಕ್ಕೆ 20 ಗುಂಟೆ, ಗ್ರಂಥಾಲಯಕ್ಕೆ 10ಗುಂಟೆ, ಪಂಚಾಯಿತಿ ಕಚೇರಿಗೆ 1 ಎಕರೆ, ಅಭಿವೃದ್ಧಿ ಅಧಿಕಾರಿ ವಸತಿ 10 ಗುಂಟೆ ಭೂಮಿಯನ್ನು ಮೀಸಲಿರಿಸಲಾಗಿದೆ.
ಭೂಮಿ ಮಂಜೂರಾಗಿ ಮೂರು ವರ್ಷ ಕಳೆದಿದೆ ಕಳೆದಿದೆ.ಆದರೆ ಈವರೆಗೂ ಅದರಲ್ಲಿ ನಿವೇಶನ ವಿತರಣೆಗೆ ಕ್ರಮ ತೆಗೆದುಕೊಂಡಿಲ್ಲ. ಕಂದಾಯ ಇಲಾಖೆಯು ಅರಣ್ಯ ಇಲಾಖೆಯ ಕಡೆಗೆ ಬೊಟ್ಟು ಮಾಡುತ್ತಿದೆ. ಅರಣ್ಯ ಇಲಾಖೆ ಡೀಮ್ಡ್ ಅರಣ್ಯದ ನೆಪ ಹೇಳುತ್ತಿದೆ.ಆದ್ದರಿಂದ ನಿವೇಶನ ಸಿಗುವವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀನಿವಾಸ ಹೇಳಿದರು.
ಸ್ಥಳಕ್ಕೆ ಬಂದ ಕಳಸ ತಹಶೀಲ್ದಾರ್ ನಂದಕುಮಾರ್ ಕಂದಾಯ ಇಲಾಖೆಯಿಂದ ಏನೆಲ್ಲ ಕೆಲಸ ಕಾರ್ಯಗಳು ಆಗಬೇಕೋ ಅದೆಲ್ಲ ಆಗಿದೆ. ಆದರೆ ಅರಣ್ಯ ಇಲಾಖೆಯು ಈ ಭೂಮಿಯನ್ನು ಡೀಮ್ಡ್ ಎಂದು ತಕರಾರು ತೆಗೆದಿರುವುದರಿಂದ ಇಲ್ಲಿ ನಿವೇಶನ ಹಂಚಿಲ್ಲ. ಈ ವಿಚಾರ ಸ್ಪ?À್ಟವಾದರೆ ಕೂಡಲೇ ನಿವೇಶನ ಹಂಚಿಕೆ ಸುಲಭ ಆಗುತ್ತದೆ ಎಂದರು.
ಬಡವರಿಗೆ ಒಂದು ಮನೆ ಕಟ್ಟಲು ಭೂಮಿ ಇಲ್ಲ ನೂರಾರು ಕಾನೂನುಗಳನ್ನು ಹೇಳುವ ಇದೇ ಅಧಿಕಾರಿಗಳು ಬಲಾಡ್ಯರಿಗೆ ನೂರಾರು ಎಕರೆ ಒತ್ತುವರಿ ಮಾಡಿದ ಭೂಮಿಗೆ ದಾಖಲಾತಿ ಮಾಡಿಕೊಡುತ್ತಾರೆ. ಹಾಗಾದರೆ ಬಡವರು ಇನ್ನೂ ಕೂಡ ಉಳ್ಳವರ ಮನೆಯ ಆಳುಗಳಾಗಿ ಕೂಲಿ ಮಾಡುವ ಲೈನ್ ನಲ್ಲಿ ಜೀವನ ಕಳೆಯ ಬೇಕೆ ಎಂದು ನಿವೇಶನ ರಹಿತರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಸ್ಥಳಕೆ ಡಿಎಪ್ಒ ಬರಬೇಕು ಮತ್ತು ಸಮಸ್ಯೆ ಬರಬೇಕು ಇಲ್ಲವಾದಲ್ಲಿ ಇಲ್ಲಿಯೇ ಆಹೋ ರಾತ್ರಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸ್ಥಳಕ್ಕೆ ಬಂದು ಮಂಗಳವಾರದಿಂದಲೇ ಸರ್ವೆ ಆರಂಭಿಸಿ ಮರ ಕಡಿಯಲು ಅಗತ್ಯವಾದ ಅನುಮತಿಗೆ ಪ್ರಕ್ರಿಯೆ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್,ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಶ್ರೀನಿವಾಸ ಪೂಜಾರಿ, ಸಂಸೆ ಪಂಚಾಯಿತಿ ಅಧ್ಯಕ್ಷ ರವಿ ಕುಮಾರ್, ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ಹಿತ್ತಲಮಕ್ಕಿ ರಾಜೇಂದ್ರ, ಮಹಮ್ಮದ್ ರಫೀಕ್, ವಿಶ್ವನಾಥ್, ಸುಜಿತ್, ಪಂಚಾಯಿತಿ ಸದಸ್ಯರಾದ ಮಮತಾ, ಮಂಜುನಾಥ್, ಸುನೀತ, ಪ್ರವೀಣ, ಶಾಂತ,ಪ್ರತಿಮಾ, ಶಂಕರೇಗೌಡ, ಜಲಜಾಕ್ಷಿ ಇತರರು ಇದ್ದರು.