ಕಳಸ ಲೈವ್ ವರದಿ
ಅಡಿಕೆ ಬೆಳೆಗೆ ತಗುಲಿರುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ನಿವಾರಣೆಗೆ ಶೃಂಗೇರಿ ಕ್ಷೇತ್ರದಲ್ಲಿ ನಡೆಯುವ ಕೋಟಿ ಕುಂಕುಮಾರ್ಚನೆಗೆ ಹೊರನಾಡಿನಲ್ಲಿ ಭಾನುವಾರ ಧನ ಸಮರ್ಪಣೆ ಮಾಡಲಾಯಿತು.
ಅಡಿಕೆ ಸಂಕಷ್ಟ ಪರಿಹಾರ ಸಮಿತಿಯ ಗೌರವಾಧ್ಯಕ್ಷರೂ ಆದ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಇದೇ ಉದ್ದೇಶಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್, ಕಳಸ ಸಹಕಾರ ಸಂಘದ ಅಧ್ಯಕ್ಷ ಮಂಜಪ್ಪಯ್ಯ ಮತ್ತಿತರ ಅಡಿಕೆ ಬೆಳೆಗಾರರು ಒಂದೂವರೆ ಲಕ್ಷ ರೂಪಾಯಿ ನೀಡಿದರು.
ಕೇಶವೇಗೌಡ, ಆಶಾಲತಾ ಜೈನ್, ವಿಜಯರಂಗ ಕೋಟೆತೋಟ, ಗಣಪತಿ ಗೌಡ, ಪರಶುರಾಮ್, ಗಣೇಶ್ ಹೆಬ್ಬಿಗೆ, ರವಿ ನಯನ, ನಾರಾಯಣ ರಾವ್, ಶಿವಕುಮಾರ್, ವಿವೇಕಾನಂದ ಮತ್ತಿತರರು ಇದ್ದರು.