ಕಳಸ ಲೈವ್ ವರದಿ
ಇಲ್ಲಿಯ ಕಲಶೇಶ್ವರ ಸ್ವಾಮಿಯವರ ಧನುರ್ಮಾಸ ರಥೋತ್ಸವ ಕಾರ್ಯಕ್ರಮವು ಭಾನುವಾರ ನಡೆಯಿತು.
ಶನಿವಾರ ಗಣಪತಿ ಪೂಜೆ ಆಧಿವಾಸ ಹೋಮದೊಂದಿಗೆ ಧನುರ್ಮಾಸದ ಪೂಜಾ ವಿಧಿ ವಿದಾನಗಳು ಪ್ರಾರಂಭಗೊಂಡು ಭಾನುವಾರ ಮದ್ಯಾಹ್ನ ಶ್ರೀ ಮನ್ಮಹಾ ಧನುರ್ಮಾಸ ರಥಾರೋಹಣ ನಡೆಯಿತು.ಕಲಶೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತು ಚಿಕ್ಕ ರಥದಲ್ಲಿ ಕುಳ್ಳಿರಿಸಿ ಕಲಶೇಶ್ವರ ದೇವಸ್ಥಾನದಿಂದ ರಥ ಬೀದಿಯ ಮಂಜಿನಕಟ್ಟೆಯವರೆಗೆ ರಥೋತ್ಸವ ಮಾಡಿ ನಂತರ ಮತ್ತೆ ಕಲಶೇಶ್ವರ ದೇವಸ್ಥಾನಕ್ಕೆ ರಥವನ್ನು ಎಳೆದು ತರಲಾಯಿತು.ರಥ ಬೀದಿಯ ಉದ್ದಕ್ಕೂ ಭಕ್ತಾಧಿಗಳು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಹರಕೆ ತೀರಿಸಿಕೊಂಡರು.
ಕಳಸ ಸುತ್ತಮುತ್ತಲಿನ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಸೋಮವಾರ ಕುಂಕುಮೋತ್ಸವ,ಕೋಟಿ ತೀರ್ಥದಲ್ಲಿ ಅವಭೃಥ ಸ್ನಾನ,ಮಂಗಳವಾರದಂದು ನಡೆಯುವ ಸಂಪ್ರೋಕ್ಷಣೆಯೊಂದಿಗೆ ಧನುರ್ಮಾಸ ರಥೋತ್ಸವ ಕಾರ್ಯಕ್ರಮವು ಕೊನೆಗೊಳ್ಳಲಿದೆ.